ಕಾರವಾರ:ಬೈಕ್ ಮತ್ತು ಬೊಲೆರೊ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಕರ್ಕಿ ಬಳಿ ನಡೆದಿದೆ.
ಹಳದಿಪುರದ ವೆಂಕಟೇಶ ಶೆಟ್ಟಿ (58) ಮೃತಪಟ್ಟ ದುರ್ದೈವಿ.
ಕಾರವಾರ:ಬೈಕ್ ಮತ್ತು ಬೊಲೆರೊ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಕರ್ಕಿ ಬಳಿ ನಡೆದಿದೆ.
ಹಳದಿಪುರದ ವೆಂಕಟೇಶ ಶೆಟ್ಟಿ (58) ಮೃತಪಟ್ಟ ದುರ್ದೈವಿ.
ಹೊನ್ನಾವರದಿಂದ ಕುಮಟಾ ಕಡೆಕೋಳಿ ತುಂಬಿಸಿಕೊಂಡು ಬರುತ್ತಿದ್ದ ಬೊಲೆರೊ ವಾಹನ ಬೈಕ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಚಾಲಕನ ತಲೆಗೆ ಗಂಭೀರ ಗಾಯವಾಗಿದ್ದು, ರಕ್ತಸ್ರಾವವಾದ ಕಾರಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೈಕ್ನ ಹಿಂಬದಿ ಸವಾರ ಸುಬ್ರಾಯ ಹೆಗಡೆ ಗಾಯಗೊಂಡಿದ್ದು, ಹತ್ತಿರದ ಶ್ರೀದೇವಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.