ಕರ್ನಾಟಕ

karnataka

ETV Bharat / state

ಅನಾರೋಗ್ಯದಿಂದ ಬೇಸತ್ತ ಮಹಿಳೆ:  ಬಾವಿಗೆ ಹಾರಿ ಆತ್ಮಹತ್ಯೆ! - ಭಟ್ಕಳ ಮಹಿಳೆ ಆತ್ಮಹತ್ಯೆ,

ಅನಾರೋಗ್ಯದಿಂದ ಬೇಸತ್ತ ಮಹಿಳೆಯೊಬ್ಬರು ತನ್ನ ಸಹೋದರಿ ಮನೆಯ ಪಕ್ಕದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ.

woman suicide, woman suicide in Bhatkal, Bhatkal woman suicide, Bhatkal woman suicide news, ಮಹಿಳೆ ಆತ್ಮಹತ್ಯೆ, ಭಟ್ಕಳದಲ್ಲಿ ಮಹಿಳೆ ಆತ್ಮಹತ್ಯೆ, ಭಟ್ಕಳ ಮಹಿಳೆ ಆತ್ಮಹತ್ಯೆ, ಭಟ್ಕಳ ಮಹಿಳೆ ಆತ್ಮಹತ್ಯೆ ಸುದ್ದಿ,
ಅನಾರೋಗ್ಯದಿಂದ ಬೇಸತ್ತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

By

Published : Jul 23, 2020, 6:33 AM IST

ಭಟ್ಕಳ (ಉತ್ತರಕನ್ನಡ): ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಅಕ್ಕನ ಮನೆಯ ಪಕ್ಕದಲ್ಲೇ ಇರುವ ಖಾಸಗಿಯವರ ಬಾವಿಗೆ ಹಾರಿ ಬುಧವಾರ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.

ಅಳ್ವೆಕೋಡಿಯ ನಿವಾಸಿ ಮಾಸ್ತಮ್ಮ ಮೊಗೇರ(42) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕಳೆದ 7 ವರ್ಷಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.

ಜನವರಿಯಲ್ಲಿ ಇವರ ಪತಿ ಮೃತಪಟ್ಟಿದ್ದು, ತದನಂತರ ಇವರು ಅವರ ಅಕ್ಕನ ಮನೆಯಲ್ಲಿ ವಾಸಿಸುತ್ತಿದ್ದರು. ಕಳೆದ 2 ದಿನಗಳಿಂದ ನಾಪತ್ತೆಯಾಗಿದ್ದ ಇವರು ಬುಧವಾರ ತನ್ನ ಅಕ್ಕನ ಮನೆಯ ಪಕ್ಕದ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಕಾಯಿಲೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ. ಈ ಬಗ್ಗೆ ಪಾಂಡು ಮಂಜು ಮೊಗೇರ ದೂರು ನೀಡಿದ್ದು, ಸ್ಥಳಕ್ಕೆ ಗ್ರಾಮೀಣ ಠಾಣೆಯ ಎ.ಎಸ್.ಐ ಮಂಜುನಾಥ ಗೌಡ, ತನಿಖಾಧಿಕಾರಿ ದಿನೇಶ ದಾತೇಕರ, ಸಿಬ್ಬಂದಿ ದೀಪಕ್ ನಾಯಕ, ಮಲ್ಲಿಕಾರ್ಜುನ ನಾಯ್ಕ ತೆರಳಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details