ಕರ್ನಾಟಕ

karnataka

ETV Bharat / state

ಮೊಗ್ಗಿನ ಮನಸ್ಸಿನಲ್ಲೇ ಪ್ರೀತಿ​, ಮುಂಬೈ ರೈಲೇರಲು ಸಜ್ಜಾಗಿದ್ದ ಲವ್​ ಬರ್ಡ್ಸ್​​! ಮುಂದೇನಾಯ್ತು ಗೊತ್ತಾ? - ಅಪ್ರಾಪ್ತ ಜೋಡಿ ಪರಾರಿ ಸುದ್ದಿ,

ಚಿಕ್ಕ ವಯಸ್ಸಿನಲ್ಲೇ ಲವ್​ನಲ್ಲಿ ಬಿದ್ದ ಪ್ರೇಮಿಗಳು ಮನೆಬಿಟ್ಟು ಹೋಗಲು ನಿರ್ಧರಿಸಿದ್ದ ಘಟನೆ ಉತ್ತರಕನ್ನಡ ಜಿಲ್ಲೆಯಲ್ಲಿ ನಡೆದಿದೆ.

minor couple escape, minor couple escape from home, minor couple escape from home in Uttar Kannada, minor couple escape news, minor couple escape latest news, ಅಪ್ರಾಪ್ತ ಜೋಡಿ ಪರಾರಿ, ಮನೆಯಿಂದ ಅಪ್ರಾಪ್ತ ಜೋಡಿ ಪರಾರಿ, ಉತ್ತರಕನ್ನಡದಲ್ಲಿ ಮನೆಯಿಂದ ಅಪ್ರಾಪ್ತ ಜೋಡಿ ಪರಾರಿ, ಉತ್ತರಕನ್ನಡದಲ್ಲಿ ಅಪ್ರಾಪ್ತ ಜೋಡಿ ಪರಾರಿ, ಅಪ್ರಾಪ್ತ ಜೋಡಿ ಪರಾರಿ ಸುದ್ದಿ,
ಚಿಕ್ಕ ವಯಸ್ಸಿಗೆ ಲವ್​, ಮುಂಬೈ ರೈಲೇರಲು ಸಜ್ಜು

By

Published : Jun 29, 2020, 10:23 AM IST

ಭಟ್ಕಳ (ಉತ್ತರಕನ್ನಡ): ಪಾಲಕರ ಕಣ್ತಪ್ಪಿಸಿ ಮುಂಬೈಗೆ ತೆರಳಲು ಸಜ್ಜಾದ ಅಪ್ರಾಪ್ತ ಜೋಡಿಯೊಂದು ರೈಲ್ವೆ ಪೊಲೀಸರ ಸಮಯ ಪ್ರಜ್ಞೆಯಿಂದ ಮನೆಗೆ ಮರಳುವಂತಾಗಿದೆ. ಈ ಘಟನೆ ತಡ ರಾತ್ರಿ ಭಟ್ಕಳ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ತಾಲೂಕಿನ ಬೈಲೂರಿನ 16 ವರ್ಷದ ಬಾಲಕ, ಮುರ್ಡೇಶ್ವರದ 15ರ ಬಾಲಕಿ ಮುಂಬೈಗೆ ತೆರಳಲು ಸಜ್ಜಾಗಿದ್ದರು. ಶುಕ್ರವಾರ ರಾತ್ರಿ ಬಾಲಕಿ ಮನೆಯಿಂದ ನಾಪತ್ತೆಯಾಗಿದ್ದಳು. ಮತ್ತೊಂದೆಡೆ ಬಾಲಕ ಅವರ ಮನೆಯಿಂದ ನಾಪತ್ತೆಯಾಗಿದ್ದ. ನಂತರ ಇಬ್ಬರು ಮುಂಬೈಗೆ ತೆರಳಲು ಅಪ್ರಾಪ್ತರು ಭಟ್ಕಳ ರೈಲ್ವೆ ನಿಲ್ದಾಣಕ್ಕೆ ಬಂದಿದ್ದರು.

ಈ ಅಪ್ರಾಪ್ತ ಜೋಡಿ ಮುಂಬೈಗೆ ತೆರಳುವ ರೈಲಿನ ಕುರಿತು ಮಾಹಿತಿ ಪಡೆದಿದ್ದಾರೆ. ಈ ವೇಳೆ ಇವರ ಚಟುವಟಿಕೆಗಳನ್ನು ಗಮನಿಸುತ್ತಿದ್ದ ರೈಲ್ವೆ ಪೊಲೀಸರಿಗೆ ಹಾಗೂ ಕರ್ತವ್ಯದಲ್ಲಿದ್ದ ಕಂದಾಯ ಇಲಾಖೆಯ ಅಧಿಕಾರಿಗಳಿಗೂ ಇವರ ಮೇಲೆ ಅನುಮಾನ ಬಂದಿದೆ. ನಂತರ ಬಾಲಕಿಯ ಬಳಿ ತೆರಳಿ ವಿಚಾರಿಸಿದ್ದಾರೆ.

ಬಾಲಕ ನಿನಗೆ ಏನಾಗಬೇಕು ಎಂದಾಗ ಅಣ್ಣನಾಗಬೇಕು ಎಂದು ತೊದಲುತ್ತಾ ಉತ್ತರಿಸಿದ್ದಾಳೆ. ಸಂಶಯಗೊಂಡ ಪೊಲೀಸರು ಮತ್ತೆ ಕೇಳಿದಾಗ ‘ನಾನು ಆತನನ್ನು ಪ್ರೀತಿಸುತ್ತಿದ್ದು, ಮನೆ ಬಿಟ್ಟು ಆತನ ಜೊತೆ ತೆರಳಲು ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾಗಿ ಒಪ್ಪಿಕೊಂಡಿದ್ದಾಳೆ.

ರೈಲ್ವೆ ಪೊಲೀಸ್ ಅಧಿಕಾರಿ ಸಿಂಗ್ ಭಟ್ಕಳ ಶಹರ್​ ಠಾಣೆಗೆ ಮಾಹಿತಿ ನೀಡಿ ಅವರ ಪಾಲಕರನ್ನು ಸ್ಥಳಕ್ಕೆ ಕರೆಯಿಸಿದ್ದಾರೆ. ಪಾಲಕರ ಸಮ್ಮುಖದಲ್ಲಿ ಇಬ್ಬರಿಗೂ ಬುದ್ಧಿವಾದ ಹೇಳಿ ಅವರವರ ಮನೆಗೆ ಕಳಿಸಲಾಗಿದೆ.

ಈ ಘಟನೆ ಕುರಿತು ಯಾವುದೇ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.

ABOUT THE AUTHOR

...view details