ಕರ್ನಾಟಕ

karnataka

ETV Bharat / state

ಆಟವಾಡುತ್ತಿದ್ದ 3 ವರ್ಷದ ಮಗು ವಾಟರ್​​​ ಟ್ಯಾಂಕ್​ಗೆ ಬಿದ್ದು ಸಾವು - Police department

9 ವರ್ಷದ ಅಕ್ಕನೊಂದಿಗೆ ಮನೆಯಲ್ಲಿ ಆಟವಾಡಿಕೊಂಡಿದ್ದ 3 ವರ್ಷದ ಮಗು ಮಳೆ ನೀರು ಶೇಖರಿಸಲು ಮಾಡಿದ್ದ ನೆಲ ಮಟ್ಟದ ನೀರಿನ ಟ್ಯಾಂಕ್​ಗೆ ಬಿದ್ದು ಮೃತಪಟ್ಟಿದೆ.

ವಾಟರ್​ ಟ್ಯಾಂಕ್​ಗೆ ಬಿದ್ದು ಮಗು ಸಾವು

By

Published : Jul 6, 2019, 9:29 PM IST

ಶಿರಸಿ: ಮನೆಯ ಎದುರು ಆಟ ಆಡುತ್ತಿದ್ದ 3 ವರ್ಷದ ಮಗುವೊಂದು ಆಕಸ್ಮಿಕವಾಗಿ ನೀರಿನ ಟ್ಯಾಂಕ್​ಗೆ ಬಿದ್ದು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಕೆನರಾ ಗಲ್ಲಿಯಲ್ಲಿ ನಡೆದಿದೆ.

ವಾಟರ್​ ಟ್ಯಾಂಕ್​ಗೆ ಬಿದ್ದು ಮಗು ಸಾವು

ನೆಹರೂ ನಗರದ ಕೆನರಾ ಗಲ್ಲಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಕೂಲಿ ಕೆಲಸ ಮಾಡುತ್ತಿದ್ದ ಯಲ್ಲಪ್ಪ ಪಾಳೇದ್ ಮತ್ತು ಲಲಿತಾ ದಂಪತಿಯ ಮಗ ಬಸವರಾಜ ಯಲ್ಲಪ್ಪ ಪಾಳೇದ್ ಮೃತಪಟ್ಟ ಮಗು.

ಅಪ್ಪ, ಅಮ್ಮ ಕೂಲಿ ಕೆಲಸಕ್ಕೆ ತೆರಳಿದ್ದಾಗ 9 ವರ್ಷದ ಅಕ್ಕನೊಂದಿಗೆ ಮನೆಯಲ್ಲಿ ಆಟವಾಡಿಕೊಂಡಿದ್ದ ಮಗು ಮಳೆ ನೀರು ಶೇಖರಿಸಲು ಮಾಡಿದ್ದ ನೆಲ ಮಟ್ಟದ ನೀರಿನ ಟ್ಯಾಂಕ್​ಗೆ ಬಿದ್ದು ಮೃತಪಟ್ಟಿದೆ ಎನ್ನಲಾಗಿದೆ.ಈ ಸಂಬಂಧ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

ABOUT THE AUTHOR

...view details