ಕರ್ನಾಟಕ

karnataka

By

Published : Oct 22, 2021, 5:25 PM IST

ETV Bharat / state

ಉಡುಪಿ : ಇಬ್ಬರು ನಕ್ಸಲ್‌ವಾದಿಗಳ ಬಂಧನಕ್ಕೆ ವಾರಂಟ್

ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ನಿವಾಸಿ ಸುಂದರಿ ಅಲಿಯಾಸ್ ಗೀತಾ ಅಲಿಯಾಸ್ ಸಿಂಧು ಹಾಗೂ ರಾಯಚೂರಿನ ಅರೋಲಿಯ ಮಹೇಶ್ ಅಲಿಯಾಸ್ ಜಯಣ್ಣ ಜಾನ್ ಅಲಿಯಾಸ್ ಮಾರಪ್ಪ ತಲೆಮರೆಸಿಕೊಂಡ ಇಬ್ಬರು ನಕ್ಸಲ್‌ವಾದಿ ಆರೋಪಿಗಳು..

warrant-for-arrest-of-two-naxalites
ಇಬ್ಬರು ನಕ್ಸಲ್ ವಾದಿಗಳ ಬಂಧನಕ್ಕೆ ವಾರಂಟ್

ಉಡುಪಿ :ಇಬ್ಬರು ನಕ್ಸಲ್ ವಾದಿಗಳ ಬಂಧನಕ್ಕೆ ವಾರಂಟ್ ಹೊರಡಿಸಲಾಗಿದೆ. ಮಾಹಿತಿದಾರರಿಗೆ ಪೊಲೀಸ್​ ಇಲಾಖೆ ವತಿಯಿಂದ 10 ಲಕ್ಷ ಬಹುಮಾನ ಘೋಷಣೆ ಮಾಡಲಾಗಿದೆ.

ಆರೋಪಿಗಳ ಪತ್ತೆಗಾಗಿ ಸಾರ್ವಜನಿಕ ಕರಪತ್ರ ಬಿಡುಗಡೆಯಾಗಿದೆ. ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ನಿವಾಸಿ ಸುಂದರಿ ಅಲಿಯಾಸ್ ಗೀತಾ ಅಲಿಯಾಸ್ ಸಿಂಧು ಹಾಗೂ ರಾಯಚೂರಿನ ಅರೋಲಿಯ ಮಹೇಶ್ ಅಲಿಯಾಸ್ ಜಯಣ್ಣ ಜಾನ್ ಅಲಿಯಾಸ್ ಮಾರಪ್ಪ ತಲೆಮರೆಸಿಕೊಂಡ ಇಬ್ಬರು ನಕ್ಸಲ್‌ವಾದಿ ಆರೋಪಿಗಳು. ರಾಷ್ಟ್ರೀಯ ತನಿಖಾ ಸಂಸ್ಥೆಯ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದಿಂದ ವಾರೆಂಟ್ ಹೊರಡಿಸಲಾಗಿದೆ.

ಓದಿ:ರಾಮನಗರ : ಈಜಲು ಕೆರೆಗೆ ಇಳಿದಿದ್ದ ಇಬ್ಬರು ಬಾಲಕರು ಸಾವು!

ABOUT THE AUTHOR

...view details