ಕರ್ನಾಟಕ

karnataka

ETV Bharat / state

ಪೇಜಾವರ ಶ್ರೀಗಳ‌ ಆರೋಗ್ಯ ವಿಚಾರಿಸಿದ ಶಿಷ್ಯೆ ಉಮಾ ಭಾರತಿ

ಕೇಂದ್ರದ ಮಾಜಿ ಸಚಿವೆ ಉಮಾ ಭಾರತಿಯವರು ಪೇಜಾವರ ಶ್ರೀ ಗಳ‌ ಆರೋಗ್ಯ ವಿಚಾರಿಸಿ, ಅವರು ಬೇಗ ಗುಣಮುಖರಾಗುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

By

Published : Dec 24, 2019, 7:06 AM IST

Uma Bharti
ಉಮಾ ಭಾರತಿ

ಉಡುಪಿ: ಕೇಂದ್ರ ಮಾಜಿ ಸಚಿವೆ ಉಮಾ ಭಾರತಿ ಅವರು ಪೇಜಾವರ ಶ್ರೀಗಳ‌ ಆರೋಗ್ಯ ವಿಚಾರಿಸಿ, ಅವರು ಬೇಗ ಗುಣಮುಖರಾಗುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಶ್ರೀ ಗಳ‌ ಆರೋಗ್ಯ ವಿಚಾರಿಸಿದ ಉಮಾ ಭಾರತಿ

ಸೋಮವಾರ ರಾತ್ರಿ ಮಣಿಪಾಲ್​ ಆಸ್ಪತ್ರೆಗೆ ಭೇಟಿ ನೀಡಿದ್ದ ಅವರು ಶ್ರೀಗಳ‌ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ನನ್ನ ಗುರುಗಳ ಆರೋಗ್ಯ ಸ್ಥಿರವಾಗಿದೆ. ಅವರಿಗೆ ಮಣಿಪಾಲ್​ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ದೊರೆಯುತ್ತಿದೆ. ಸ್ವಾಮೀಜಿಯವರಿಗೆ ಕೋಟ್ಯಂತರ ಅಭಿಮಾನಿಗಳಿದ್ದು, ಎಲ್ಲರೂ ಅವರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿಬೇಕು. ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಶ್ರೀಗಳ‌ ಕುರಿತು ವಿಶೇಷ ಮುತುವರ್ಜಿ ವಹಿಸಿದ್ದಾರೆ. ಸಿಎಂ ಯಡಿಯೂರಪ್ಪ ಕೂಡ ವಿಶೇಷ ಕಾಳಜಿ ತೋರಿದ್ದಾರೆ ಎಂದರು.

ABOUT THE AUTHOR

...view details