ಉಡುಪಿ :ಲಾಕ್ಡೌನ್ ಸಡಿಲಿಕೆ ಬಳಿಕ ದೇವಸ್ಥಾನಗಳ ಬಾಗಿಲು ತೆರೆದು ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ತೀರ್ಥವನ್ನು ದೇಗುಲದಲ್ಲಿ ನೀಡಲಾಗುತ್ತಿಲ್ಲ. ಇದಕ್ಕಾಗಿಯೇ ಉಡುಪಿಯ ಪ್ರೊಫೆಸರ್ವೊಬ್ಬರು ಉಪಾಯ ಕಂಡುಕೊಂಡಿದ್ದಾರೆ.
ದೇಗುಲದಲ್ಲಿ ತೀರ್ಥ ನೀಡಲು ಬಂತು ಯಂತ್ರ.. ಉಡುಪಿ ಪ್ರೊಫೆಸರ್ವೊಬ್ಬರ ಆವಿಷ್ಕಾರ - Theertha coming from machine
ಲಾಕ್ಡೌನ್ ಹಿನ್ನೆಲೆಯಲ್ಲಿ ಕೆಲ ತಿಂಗಳ ಕಾಲ ದೇವಸ್ಥಾನಗಳು ಮುಚ್ಚಲ್ಪಟ್ಟಿದ್ದು, ಇದೀಗ ಸರ್ಕಾರದ ಮಾರ್ಗ ಸೂಚಿಗಳನ್ವಯ ಮತ್ತೆ ತೆರೆದಿವೆ. ಆದರೆ ನಿಯಮಾವಳಿಗಳ ಪ್ರಕಾರ ತೀರ್ಥ ವಿತರಣೆ ಮಾತ್ರ ದೇವಸ್ಥಾನಗಳಿಗೆ ಸವಾಲಾಗಿದೆ. ಇದಕ್ಕಾಗಿ ಕರಾವಳಿಯಲ್ಲಿ ಹೊಸ ಆವಿಷ್ಕಾರ ಮಾಡಲಾಗಿದೆ..
![ದೇಗುಲದಲ್ಲಿ ತೀರ್ಥ ನೀಡಲು ಬಂತು ಯಂತ್ರ.. ಉಡುಪಿ ಪ್ರೊಫೆಸರ್ವೊಬ್ಬರ ಆವಿಷ್ಕಾರ ಉಡುಪಿ ಉಪನ್ಯಾಸಕರೊಬ್ಬರ ಅವಿಸ್ಕಾರ](https://etvbharatimages.akamaized.net/etvbharat/prod-images/768-512-7739405-860-7739405-1592921590108.jpg)
ಉಡುಪಿ ಉಪನ್ಯಾಸಕರೊಬ್ಬರ ಅವಿಸ್ಕಾರ
ಉಡುಪಿ ಉಪನ್ಯಾಸಕರೊಬ್ಬರ ಅವಿಸ್ಕಾರ..
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಕಾಲೇಜಿನ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ತೀರ್ಥ, ಪ್ರಸಾದದ ಕೊರತೆ ಇಲ್ಲ. ಯಾಕೆಂದರೆ, ಸ್ವಯಂಚಾಲಿತ ಯಂತ್ರದ ಮೂಲಕ ತೀರ್ಥ ವಿತರಿಸಲಾಗುತ್ತೆ. ದೇವರ ದರ್ಶನದ ಬಳಿಕ ಈ ಯಂತ್ರದ ಮುಂದೆ ಕೈಚಾಚಿದಾಗ ತೀರ್ಥ ಕೈ ಸೇರುತ್ತೆ.
ಅಂದಹಾಗೆ ಈ ಸ್ವಯಂಚಾಲಿತ ವಿನೂತನ ಯಂತ್ರವನ್ನು ಅಭಿವೃದ್ಧಿ ಪಡಿಸಿರೋದು ಕಾರ್ಕಳದ ನಿಟ್ಡೆ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಸಂತೋಷ್. ವೃತ್ತಿಯಲ್ಲಿ ಉಪನ್ಯಾಸಕರಾದ ಇವರು ಸೀಮಿತ ಪರಿಕರಗಳನ್ನು ಉಪಯೋಗಿಸಿ ಈ ಯಂತ್ರ ತಯಾರಿಸಿದ್ದಾರೆ. 2,700 ರೂ.ಗಳಿಗೆ ಮಾರಾಟ ಮಾಡುವ ಉದ್ದೇಶ ಹೊಂದಿದ್ದಾರೆ.