ಕರ್ನಾಟಕ

karnataka

ETV Bharat / state

ಕಳ್ಳತನ ಆರೋಪ: ₹40 ಲಕ್ಷ ಮೌಲ್ಯದ ಯಂತ್ರೋಪಕರಣ ಗುಜರಿಗೆ ಮಾರಿದ್ದ ಶಿಕ್ಷಕ-ಪತ್ರಕರ್ತ ಅರೆಸ್ಟ್​ - ಶಿಕ್ಷಕ-ಪತ್ರಕರ್ತ ಬಂಧನ

₹ 40 ಲಕ್ಷ ರೂಪಾಯಿ ಮೌಲ್ಯದ ಯಂತ್ರೋಪಕರಣಗಳನ್ನು ಕಳ್ಳತನ ಮಾಡಿ ಗುಜರಿಗೆ ಮಾರಿದ್ದ ಆರೋಪದ ಮೇಲೆ ಶಿಕ್ಷಕ ಮತ್ತು ಪತ್ರಕರ್ತನನ್ನು ಬಂಧಿಸಿರುವ ಪೊಲೀಸರು, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.

Teacher-journalist arrest
ಶಿಕ್ಷಕ-ಪತ್ರಕರ್ತ ಬಂಧನ

By

Published : Apr 25, 2020, 2:51 PM IST

ಉಡುಪಿ: ಸೂಡಾ ಗ್ರಾಮದ ಕ್ರಷರ್​​ನಲ್ಲಿ ಅಳವಡಿಸಿದ ಸುಮಾರು ₹40 ಲಕ್ಷ ಮೌಲ್ಯದ ಯಂತ್ರೋಪಕರಣಗಳನ್ನು ಕಳ್ಳತನ ಮಾಡಿ ಗುಜರಿಗೆ ಮಾರಿದ್ದ ಪ್ರಕರಣದಲ್ಲಿ ಭಾಗಿಯಾದ ಆರೋಪದಡಿ ಶಿಕ್ಷಕ ಸೇರಿ ಇಬ್ಬರು ಆರೋಪಿಗಳನ್ನು ಗ್ರಾಮಾಂತರ ಠಾಣಾಧಿಕಾರಿ ನಾಸೀರ್ ಹುಸೈನ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.

168-P1ರಲ್ಲಿ ಸುಮಾರು ಮೂರೂವರೆ ಎಕರೆ ಪ್ರದೇಶದ ಕ್ರಷರ್‌ನಲ್ಲಿ ಜೋಡಣೆಯಾಗಿದ್ದ ಯಂತ್ರೋಪಕರಣ ಫೆ.27ರಿಂದ ಏ.22ರ ಅವಧಿಯಲ್ಲಿ ಕಳ್ಳತನವಾಗಿದ್ದು, ಈ ಕುರಿತು ಮಾಲೀಕ ಸುರೇಶ್ ಶೆಟ್ಟಿ ಎಂಬುವರು ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದರು. ಪೊಲೀಸರು ನಡೆಸಿದ ತನಿಖೆಯಲ್ಲಿ ಸೂಡಾದ ಶಿಕ್ಷಕ ರಿತೇಶ್ ಶೆಟ್ಟಿ (50) ಹಾಗೂ ಚರಣ್ ನಾಯಕ್ (29) ಎಂಬವರು ಪ್ರಕರಣದ ಆರೋಪಿಗಳು ಎಂಬುದು ತಿಳಿದು ಬಂದಿದೆ.

ಪ್ರಕರಣದ ಪ್ರಮುಖ ಆರೋಪಿ ಚರಣ್ ಸ್ಥಳೀಯ ಸುದ್ದಿವಾಹಿನಿಯೊಂದರಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದ. ಸುರೇಶ್​​​​ ಅವರಿ​ಗೆ ಸೇರಿರುವ ಕ್ರಷರ್​​​ನೊಳಗೆ ನಮ್ಮದು ಎಂದು ಹೇಳಿ ಮಂಗಳೂರಿನ ಗುಜುರಿ ವ್ಯಾಪಾರಿಗಳಾದ ಹುಸೈನ್ ಹಾಗೂ ಇಸ್ಮಾಯಿಲ್ ಅವರನ್ನು ಕರೆದುಕೊಂಡು ಬಂದು ವ್ಯಾಪಾರ ಕುದುರಿಸಿದ್ದ. ಕ್ರಷರ್ ಬಂದಾಗಿ ವರ್ಷಗಳೇ ಕಳೆದಿವೆ. ಅದನ್ನು ಮಾರಾಟ ಮಾಡುವ ಉದ್ದೇಶ ಹೊಂದಿರುವುದಾಗಿ ನಂಬಿಸಿದ್ದ.

ಪೊಲೀಸರು ವಶಪಡಿಸಿಕೊಂಡಿರುವ ಲಾರಿ

ಜೆಸಿಬಿ ಮೂಲಕ ಸ್ವಚ್ಛತಾ ಕಾರ್ಯ ನಡೆಸಿ ಕ್ರಷರ್‌ನಲ್ಲಿದ್ದ ಯಂತ್ರೋಪಕರಣಗಳು ಹಾಗೂ ಬಿಡಿ ಭಾಗಗಳನ್ನು ಮಾರಿದ್ದ.

ABOUT THE AUTHOR

...view details