ಕರ್ನಾಟಕ

karnataka

ETV Bharat / state

ಅನಾಥರ ಬಾಳಿಗೆ ಹೊಸಬೆಳಕು ನೀಡಿ ಅಕ್ಕರೆಯ ಅಮ್ಮನಾದ್ರು ತನುಲಾ ತರುಣ್ - ಉಡುಪಿ ಸುದ್ದಿ

ಉಡುಪಿ ಜಿಲ್ಲೆಯ ಹೊಸಬೆಳಕು ಆಶ್ರಮದಲ್ಲಿ 15 ಕ್ಕೂ ಹೆಚ್ಚು ನಿರ್ಗತಿಕರನ್ನು ಸಾಕಿ ಸಲುಹುತ್ತಾ ಬಂದಿರುವ ತನುಲಾ ತರುಣ್ ಅವರಿಗೆ ಅಮ್ಮಂದಿರ ದಿನದ ಶುಭಾಶಯಗಳು.

tanula tarun from hosabelaku orphanage
ಅನಾಥರ ಬಾಳಿಗೆ ಹೊಸಬೆಳಕು

By

Published : May 10, 2020, 10:57 AM IST

'ಅಮ್ಮ ಎಂದರೆ ಏನೋ ಹರುಷವೂ, ನಮ್ಮ ‌ಪಾಲಿಗೆ ಅವಳೇ ದೈವವೂ....' ಅಮ್ಮ ಎಂಬ ಎರಡಕ್ಷರ ಅದೆಷ್ಟು ಖುಷಿ ಕೊಡುತ್ತೆ ಅಲ್ವಾ?. 9 ತಿಂಗಳು ಹೊತ್ತು ಹೆತ್ತು ಸಾಕಿ ಸಲುಹುತ್ತಾಳೆ ಅಮ್ಮ. ಇಲ್ಲೊಬ್ಬಾಕೆ ನಿರ್ಗತಿಕರ, ಬಡವರ, ಅನಾಥರ ಪಾಲಿಗೆ ಪ್ರೀತಿಯ ಅಮ್ಮನಾಗಿದ್ದಾರೆ. ಉಡುಪಿಯ ಹೊಸಬೆಳಕು ಆಶ್ರಮದಲ್ಲಿ ನಿರ್ಗತಿಕರ ಪಾಲಿಗೆ ಅಮ್ಮನಾದ ಮಹಿಳೆಯ ಕಥೆ ಇದು.

ಅನಾಥರ ಬಾಳಿಗೆ ಹೊಸಬೆಳಕಾದ ತನುಲಾ ತರುಣ್
ಇವರ ಹೆಸರು ತನುಲಾ ತರುಣ್. ಚಿಕ್ಕಂದಿನಿಂದಲೇ ನೊಂದವರ ಪಾಲಿಗೆ ಬೆಳಕಾಗಬೇಕು ಅನ್ನೋ ಆಸೆ ಇವರಿಗಿತ್ತಂತೆ. ಮದ್ವೆ ಆಗಿ ಎರಡು ಹೆಣ್ಣು ಮಕ್ಕಳ‌ ತಾಯಿಯಾದ್ರೂ ಅನಾಥರ ಪಾಲಿಗೆ ಅಮ್ಮ‌ ಆಗಬೇಕು ಅನ್ನೋದು ಇವರ ಹೆಬ್ಬಯಕೆ. ಹೌದು, ಜಿಲ್ಲೆಯ ಕುಟುಂಬವೊಂದರ ಸಂಕಷ್ಟಕ್ಕೆ ನೆರವಾಗಲು ಹೋದ ಇವರು ನಂತರದ ದಿನಗಳಲ್ಲಿ ಹೊಸಬೆಳಕು ಎಂಬ ಆಶ್ರಮವನ್ನೇ ಕಟ್ಟಿದರು. ಮೊದಲಿಗೆ ಕೇವಲ ಮೂವರಿಗೆ ಆಶ್ರಮ‌‌ ಆರಂಭಿಸಿದ್ದ ಇವರು 15 ಕ್ಕೂ ಹೆಚ್ಚು ಅನಾಥರು, ನಿರ್ಗತಿಕರ ಬಾಳಿಗೆ ಅಮ್ಮನಾಗಿ ಬೆಳಕಾಗುತ್ತಿದ್ದಾರೆ.
ದಿನ ಬೆಳಗ್ಗೆ ಉಪಹಾರದಿಂದ ಹಿಡಿದು, ಅಡುಗೆ ಕೆಲಸ ಮಾಡಿ, ನಿರ್ಗತಿಕರ ಚಾಕರಿಯನ್ನು ಸ್ವತಃ ತಾವೇ ಮಾಡ್ತಾರೆ. ಮಾನಸಿಕ ಅಸ್ಚಸ್ಥರಿಂದ ಹಿಡಿದು ಕ್ಯಾನ್ಸರ್ ಕಾಯಿಲೆಯ ರೋಗಿಗಳನ್ನು, ರಸ್ತೆಯಲ್ಲಿ ನಿರ್ಗತಿಕರಾಗಿ ಅಲೆಯೋ ಮಂದಿಯನ್ನು ಮಕ್ಕಳಂತೆ ಸಾಕಿ ಸಲಹುತ್ತಿದ್ದಾರೆ. ಇದಕ್ಕೆ ತನ್ನ ಪತಿ ಮತ್ತು ಕುಟುಂಬ ನೀಡುತ್ತಿರುವ ಸಹಕಾರವನ್ನು ತನುಲಾ ನೆನಪಿಸಿಕೊಳ್ತಾರೆ. ಪ್ರಚಾರವಿಲ್ಲದೆ, ಸುದ್ದಿಯಾಗದೇ ಸೈಲೆಂಟ್ ಆಗಿ ಕೆಲಸ ಮಾಡ್ತಾ ಇರುವ ತನುಲಾ ತರುಣ್ ಅವರಿಗೆ ಸಾರ್ವಜನಿಕರ, ದಾನಿಗಳ ಸಹಾಯ ಸಿಕ್ಕಿದ್ರೆ ಆಶ್ರಮವನ್ನು ಇನ್ನಷ್ಟು ವಿಸ್ತರಿಸೋ ಬಯಕೆ ಇದೆ.

ABOUT THE AUTHOR

...view details