ಕರ್ನಾಟಕ

karnataka

By

Published : Feb 6, 2020, 1:04 PM IST

Updated : Feb 6, 2020, 1:27 PM IST

ETV Bharat / state

ಉಡುಪಿಯಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು... ಗಂಡನ ಮನೆಯವರ ಮೇಲೆ ಗುಮಾನಿ

ಕೊಪ್ಪಳ ಮೂಲದ ಗೃಹಿಣಿವೋರ್ವಳು ಉಡುಪಿ ಜಿಲ್ಲೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಈಕೆಯ ಸಾವು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

ಉಡುಪಿಯಲ್ಲಿ ಗೃಹಿಣಿ ಅನುಮಾನಸ್ಪದ ಸಾವು
Suspected death of a housewife in Udupi

ಉಡುಪಿ: ಕೊಪ್ಪಳ ಮೂಲದ ಗೃಹಿಣಿಯೋರ್ವಳು ಜಿಲ್ಲೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಈ ಸಾವಿನಿಂದ ಗಂಡನ ಮನೆಯವರ ಮೇಲೆ ಶಂಕೆ ವ್ಯಕ್ತವಾಗಿದೆ.

ಉಡುಪಿಯಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು, ಗಂಡನ ಮನೆಯವರ ಮೇಲೆ ಗುಮಾನಿ

ಹನುಮವ್ವ ಸಾವನ್ನಪ್ಪಿದ ಗೃಹಿಣಿ. ಈಕೆ ಕಳೆದ ಎಂಟು ತಿಂಗಳ ಹಿಂದೆ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಬಾಗಲಕೋಟೆ ಮೂಲದ ಮಂಜು ಎಂಬುವನನ್ನು ಮದುವೆಯಾಗಿ ಉಡುಪಿಯಲ್ಲಿ ನೆಲೆಸಿದ್ದಳು. ಮದುವೆಯಾದ ಹೊಸದರಲ್ಲೇ ಗಂಡ, ಅತ್ತೆ-ಮಾವನಿಂದ ನಿರಂತರ ಕಿರುಕುಳ ಅನುಭವಿಸಿದ್ದಳೆನ್ನಲಾದ ಹನುಮವ್ವ, ಅಕ್ಷರಶಃ ಗೃಹ ಬಂಧನದಲ್ಲಿದ್ದಳಂತೆ. ಈ ಬಗ್ಗೆ ತನ್ನ ಅಕ್ಕನ ಬಳಿ ಅನೇಕ ಬಾರಿ ಹೇಳಿಕೊಂಡಿದ್ದ ಎಂದು ತಿಳಿದುಬಂದಿದೆ. ಜ.31ರಂದು ಗಂಡನ ಮನೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಆಕೆಯ ಪೋಷಕರು ಗಂಡನ ಮನೆಯವರ ಮೇಲೆ ಸಂಶಯ ವ್ಯಕ್ತಪಡಿಸಿದ್ದಾರೆ.

ಹನುಮವ್ವನ ಸಾವಿನ ಬಗ್ಗೆ ಗಂಡನ ಮನೆಯವರು ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಆಕೆ ಮಂಚದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಳು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾಳೆ ಎಂದು ಹೇಳಿಕೆ ನೀಡಿದ್ದರು.

ಇದೆಲ್ಲ ಸುಳ್ಳು. ಗಂಡನ ಮನೆಯವರೇ ವ್ಯವಸ್ಥಿತ ಕೊಲೆ ಮಾಡಿದ್ದಾರೆ ಎಂಬುದು ಹನುಮವ್ವನ ಮನೆಯವರ ಹಾಗೂ ಗ್ರಾಮಸ್ಥರ ಗಂಭೀರ ಆರೋಪವಾಗಿದೆ. ಪ್ರಕರಣದ ಮರಣೋತ್ತರ ಪರೀಕ್ಷಾ ವರದಿ ಬರಬೇಕಾಗಿದ್ದು, ಸಾವಿನ ಸಮಗ್ರ ತನಿಖೆ ಆಗಬೇಕಾಗಿದೆ. ಮನೆಯಿಂದ ಹೊರ ದಬ್ಬಿರುವ ಮೊದಲ ಪತ್ನಿಗೂ ನ್ಯಾಯ ಸಿಗಬೇಕು ಅನ್ನೋದು ಗ್ರಾಮಸ್ಥರ ಒತ್ತಾಯವಾಗಿದೆ.

Last Updated : Feb 6, 2020, 1:27 PM IST

ABOUT THE AUTHOR

...view details