ಕರ್ನಾಟಕ

karnataka

By

Published : Dec 11, 2019, 11:36 AM IST

ETV Bharat / state

ಕ್ಷುಲ್ಲಕ ಜಗಳದಲ್ಲಿ ಚೂರಿಯಿಂದ ತೊಡೆಗೆ ಇರಿದ ತಂದೆ.. ರಕ್ತ ಸ್ರಾವದಿಂದ ಮಗ ಸಾವು

ತಂದೆ ಮಗನ ನಡುವಿನ ಕ್ಷುಲ್ಲಕ ಜಗಳ ಮಗನ ಸಾವಿನಲ್ಲಿ ಅಂತ್ಯವಾದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ‌ ಮಿಯ್ಯಾರು ಮಂಗಳಪಾದೆ ಎಂಬಲ್ಲಿ ನಡೆದಿದೆ.

son
ತಂದೆಯಿಂದ ಮಗನ‌ ಮೇಲೆ ಹಲ್ಲೆ

ಉಡುಪಿ: ತಂದೆ ಮಗನ ನಡುವಿನ ಕ್ಷುಲ್ಲಕ ಜಗಳ ಮಗನ ಸಾವಿನಲ್ಲಿ ಅಂತ್ಯವಾದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ‌ ಮಿಯ್ಯಾರು ಮಂಗಳಪಾದೆ ಎಂಬಲ್ಲಿ ನಡೆದಿದೆ.

ತಂದೆಯಿಂದ ಮಗನ‌ ಮೇಲೆ ಹಲ್ಲೆ

ಕಾರ್ಕಳ ತಾಲೂಕು ಮಂಗಳಪಾದೆ ನಿವಾಸಿ ವಿವಿಯನ್ ಡಿಸೋಜ (24) ಕೊಲೆಯಾಗಿದ್ದು, ತಂದೆ ವಿಕ್ಟರ್ ಡಿಸೋಜ (58) ಆರೋಪಿಯಾಗಿದ್ದಾರೆ. ಮುಂಬೈನಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿದ್ದ ವಿವಿಯನ್ ಮೂರು ತಿಂಗಳ ಹಿಂದೆ ಊರಿಗೆ ಬಂದಿದ್ದರು. ಉದ್ಯೋಗ ವಿಲ್ಲದೇ ಮನೆಯಲ್ಲೇ ಕಾಲ ಕಳೆಯುತ್ತಿದ್ದ ವಿವಿಯನ್ ಮತ್ತು ಇವರ ತಂದೆ ಕ್ಷುಲ್ಲಕ ವಿಚಾರದಲ್ಲಿ ನಿನ್ನೆ ಜಗಳ‌ ಆಗಿತ್ತು. ಈ ಜಗಳದಿಂದ ವಿಕ್ಟರ್ ಡಿಸೋಜ‌ ಮಗನ‌ ತೊಡೆಗೆ ಬಲವಾಗಿ ಚೂರಿಯಿಂದ ಇರಿದಿದ್ದರು.

ತಂದೆಯಿಂದ ಮಗನ‌ ಮೇಲೆ ಹಲ್ಲೆ

ರಕ್ತಸ್ರಾವ ನಿಲ್ಲದೆ ವಿವಿಯನ್ ಮೃತಪಟ್ಟಿದ್ದಾರೆ. ಕಾರ್ಕಳ ನಗರ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ವಿಕ್ಟರ್ ನನ್ನ ಬಂಧಿಸಿದ್ದಾರೆ.

ABOUT THE AUTHOR

...view details