ಕರ್ನಾಟಕ

karnataka

ETV Bharat / state

ಕಂಗ್ರಾಜುಲೇಷನ್ಸ್‌ ನರೇಂದ್ರ ಮೋದಿ.. ನಮೋ ಸಂಪುಟಕ್ಕೆ ಮರಳು ಶಿಲ್ಪದ ಮೂಲಕ ಶುಭಾಶಯ..

ಖ್ಯಾತ ಮರಳು ಶಿಲ್ಪ ಕಲಾವಿದ ಹರೀಶ್ ಸಾಗಾ ಹಾಗೂ ತಂಡ ಪ್ರಧಾನಿ ನರೇಂದ್ರ ಮೋದಿಗೆ ಮಲ್ಪೆ ಕಡಲತಡಿಯಲ್ಲಿ ಮರಳು ಶಿಲ್ಪ ರಚನೆಯ ಮೂಲಕ ಶುಭ ಕೋರಿದ್ದಾರೆ.

By

Published : May 31, 2019, 10:47 AM IST

ಮೋದಿ ಸಂಪುಟಕ್ಕೆ ಮರಳು ಶಿಲ್ಪದ ಮೂಲಕ ಶುಭಾಶಯ

ಉಡುಪಿ :ಎರಡನೇ ಬಾರಿಗೆ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ಮೋದಿ ಸಂಪುಟಕ್ಕೆ ಶುಭಾಶಯ ಕೋರಿ ಉಡುಪಿ ಜಿಲ್ಲೆಯ ಖ್ಯಾತ ಮರಳು ಶಿಲ್ಪ ಕಲಾವಿದ ಕುಂದಾಪುರದ ಹರೀಶ್ ಸಾಗಾ ಅವರ ನೇತೃತ್ವದ ತಂಡ ಶುಭಾಶಯ ಕೋರಿ ಮಲ್ಪೆ ಕಡಲತಡಿಯಲ್ಲಿ ಮರಳುಶಿಲ್ಪ ರಚನೆ ಮೂಲಕ ಶುಭ ಕೋರಿದ್ದಾರೆ.

ಮೋದಿ ಸಂಪುಟಕ್ಕೆ ಮರಳು ಶಿಲ್ಪದ ಮೂಲಕ ಶುಭಾಶಯ

ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸ್ಲೋಗನ್ ಅಡಿಯಲ್ಲಿ ರಚಿಸಿದ ಮರಳು ಶಿಲ್ಪ ಮಲ್ಪೆ ಕಡಲ ತೀರದ ಪ್ರವಾಸಿಗರನ್ನು ಆಕರ್ಷಿಸಿತು. ಅನೇಕ ಪ್ರವಾಸಿಗರು, ಮೋದಿ ಅಭಿಮಾನಿಗಳು ಮರಳು ಶಿಲ್ಪದ ಎದುರು ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡರು.

ABOUT THE AUTHOR

...view details