ಕರ್ನಾಟಕ

karnataka

By

Published : Sep 19, 2020, 2:25 PM IST

ETV Bharat / state

ಉಡುಪಿಯಲ್ಲಿ ಮತ್ತೆ ಸಕ್ರಿಯವಾದ ದರೋಡೆ ಗ್ಯಾಂಗ್​; ಯುವಕನ ಮೊಬೈಲ್ ಕಿತ್ತು ಪರಾರಿ

ಮಣಿಪಾಲ ಠಾಣಾ ವ್ಯಾಪ್ತಿಯ ಅಲೆವೂರು ಗ್ರಾಮದ ಗುಡ್ಡೆ ಅಂಗಡಿ ಸರ್ಕಲ್ ಬಳಿ ಯುವಕನೋರ್ವನಿಗೆ ಚಾಕು ತೋರಿಸಿ ದರೋಡೆ ಗ್ಯಾಂಗ್​ ಬೆದರಿಸಿದೆ. ಯುವಕನ ಚೀರಾಟಕ್ಕೆ ವಿಚಲಿತರಾದ ತಂಡ ಮೊಬೈಲ್​ ಕಿತ್ತುಕೊಂಡು ಪರಾರಿಯಾಗಿದೆ.

Udupi
Udupi

ಉಡುಪಿ:ನಿರ್ಜನ ಪ್ರದೇಶದಲ್ಲಿ ಸಂಚರಿಸುವ ಜನರನ್ನು ಅಡ್ಡಗಟ್ಟಿ ಹಣ-ಮೊಬೈಲ್ ದೋಚುವ ತಂಡ ಉಡುಪಿಯಲ್ಲಿ ಮತ್ತೆ ಸಕ್ರಿಯವಾಗಿದೆ. ಇಂದು ಬೆಳ್ಳಂಬೆಳಗ್ಗೆ ವ್ಯಕ್ತಿಯೊಬ್ಬರಿಂದ ಮೊಬೈಲ್ ಕಿತ್ತು ಇಬ್ಬರು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಉಡುಪಿಯಲ್ಲಿ ಆಕ್ಟಿವ್ ದರೋಡೆ ಗ್ಯಾಂಗ್

ಮಣಿಪಾಲ ಠಾಣಾ ವ್ಯಾಪ್ತಿಯ ಅಲೆವೂರು ಗ್ರಾಮದ ಗುಡ್ಡೆಅಂಗಡಿ ಸರ್ಕಲ್ ಬಳಿ ಈ ಘಟನೆ ನಡೆದಿದೆ. ರಾತ್ರಿ ಪಾಳಿಯ ಕೆಲಸ ಮುಗಿಸಿ ಬರುತ್ತಿದ್ದ ಉದ್ಯಾವರದ ಯುವಕನನ್ನು ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ಚಾಕು ತೋರಿಸಿ ಹಣಕ್ಕಾಗಿ ಒತ್ತಾಯಿಸಿದ್ದಾರೆ. ತಕ್ಷಣವೇ ಅಲರ್ಟ್ ಆದ ಯುವಕ ಬೊಬ್ಬೆ ಹೊಡೆದಿದ್ದಾನೆ. ಇದರಿಂದ ವಿಚಲಿತರಾದ ದುಷ್ಕರ್ಮಿಗಳು ಆತನ ಕೈಯಿಂದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ನಗರದ ವಿವಿಧ ಕಡೆಗಳಲ್ಲಿ ಇದೇ ರೀತಿಯ ಪ್ರಯತ್ನ ನಡೆದಿದೆ ಎಂಬ ವದಂತಿ ಹಬ್ಬಿದೆ. ಈ ಹಿಂದೆಯೂ ಮಣಿಪಾಲ ಸುತ್ತಮುತ್ತ ಇದೇ ಮಾದರಿಯ ದುಷ್ಕೃತ್ಯಗಳು ನಡೆದಿದ್ದು ಜನರನ್ನು ಆತಂಕಗೊಳಿಸಿದೆ.

ABOUT THE AUTHOR

...view details