ಕರ್ನಾಟಕ

karnataka

By

Published : Oct 16, 2020, 4:33 PM IST

ETV Bharat / state

ಪೊಲೀಸ್ ಜೀಪ್ ಪಲ್ಟಿ: ಕರ್ತವ್ಯದಲ್ಲಿದ್ದ ಬೈಂದೂರು ಇನ್ಸ್​​ಪೆಕ್ಟರ್, ಚಾಲಕನಿಗೆ ಗಾಯ

ಗುರುವಾರ ತಡರಾತ್ರಿ ಬೀಟ್ ಕರ್ತವ್ಯದಲ್ಲಿದ್ದ ಇನ್ಸ್‌ಪೆಕ್ಟರ್ ಸುರೇಶ್ ನಾಯ್ಕ್, ಜೀಪ್​ ಚಾಲಕ ಹೇಮರಾಜ್ ಅವರಿಗೆ ಅಪಘಾತದಲ್ಲಿ ತಲೆ, ಕೈ-ಕಾಲಿಗೆ ಗಾಯವಾಗಿದ್ದು, ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿರೂರಿನಿಂದ ಬೈಂದೂರು ಕಡೆ ಬರುವಾಗ ರಾಘವೇಂದ್ರ ಸ್ವಾಮಿ ಮಠದ ಬಳಿ ಇಲಾಖೆಯ ಜೀಪ್​ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದಿದೆ.

police-jeep-accident-byndoor-insector-and-driver-injury
ಪೊಲೀಸ್ ಜೀಪ್ ಪಲ್ಟಿ: ಕರ್ತವ್ಯದಲ್ಲಿದ್ದ ಬೈಂದೂರು ಇನ್ಸ್​​ಪೆಕ್ಟರ್, ಚಾಲಕನಿಗೆ ಗಾಯ

ಉಡುಪಿ: ಬೈಂದೂರು ತಾಲೂಕಿನ ಪಡುವರಿ ಗ್ರಾಮದ ಒತ್ತಿನಣೆ ಬಳಿ ಗುರುವಾರ ರಾತ್ರಿ ಕರ್ತವ್ಯದಲ್ಲಿದ್ದ ವೃತ್ತ ನಿರೀಕ್ಷಕರ ಜೀಪ್​ ಪಲ್ಟಿಯಾದ ಪರಿಣಾಮ ಬೈಂದೂರು ಇನ್ಸ್‌ಪೆಕ್ಟರ್ ಹಾಗೂ ಜೀಪ್​ ಚಾಲಕ ಗಾಯಗೊಂಡಿದ್ದಾರೆ.

ಪೊಲೀಸ್ ಜೀಪ್ ಪಲ್ಟಿ: ಕರ್ತವ್ಯದಲ್ಲಿದ್ದ ಬೈಂದೂರು ಇನ್ಸ್​​ಪೆಕ್ಟರ್, ಚಾಲಕನಿಗೆ ಗಾಯ

ತಡರಾತ್ರಿ ಬೀಟ್ ಕರ್ತವ್ಯದಲ್ಲಿದ್ದ ಇನ್ಸ್‌ಪೆಕ್ಟರ್ ಸುರೇಶ್ ನಾಯ್ಕ್, ಜೀಪು ಚಾಲಕ ಹೇಮರಾಜ್ ಅವರಿಗೆ ಅಪಘಾತದಲ್ಲಿ ತಲೆ, ಕೈ-ಕಾಲಿಗೆ ಗಾಯವಾಗಿದ್ದು, ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿರೂರಿನಿಂದ ಬೈಂದೂರು ಕಡೆ ಬರುವಾಗ ರಾಘವೇಂದ್ರ ಸ್ವಾಮಿ ಮಠದ ಬಳಿ ಇಲಾಖೆಯ ಜೀಪು ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಯಲ್ಲಿ ಪಲ್ಟಿಯಾಗಿದೆ.

ಅಪಘಾತದ ರಭಸಕ್ಕೆ ಜೀಪು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಜೀಪ್ ನಲ್ಲಿ ಸಿಕ್ಕಿಬಿದ್ದ ಇಬ್ಬರನ್ನು ಹೊರತೆಗೆಯಲು ಸುಮಾರು ಒಂದು ತಾಸು ಕಾರ್ಯಾಚರಣೆ ನಡೆಸಲಾಯಿತು ಎಂದು ತಿಳಿದುಬಂದಿದೆ.

ABOUT THE AUTHOR

...view details