ಉಡುಪಿ:ರಾತ್ರಿ ವೇಳೆ ಭೂತ, ಪ್ರೇತಗಳ ಸಂಚಾರ ಮಾಡುತ್ತೆ. ದೆವ್ವ ಇದೆ. ಇವೆಲ್ಲಾ ನಾವು ಕೇಳಿರಿತ್ತೀವಿ ಅದ್ರೆ ಇಲ್ಲಿ ಮಾತ್ರ ಹಗಲಿನಲ್ಲಿ ಎರಡು ಪ್ರೇತಗಳು ದಾರಿ ಉದ್ದಕ್ಕೂ ಸಂಚಾರ ನಡೆಸುತ್ತಾ ಇವೆ. ಈ ಪ್ರೇತಗಳಾವು ಅಂತ ಆಶ್ಚರ್ಯ ಪಡ್ಬೇಡಿ ಇವರು ದಸರಾ ಪ್ರಯುಕ್ತ ನವರಾತ್ರಿಯ ಪ್ರೇತ ವೇಷಧಾರಿಗಳು.
ಹಗಲಿನಲ್ಲಿಯೇ ಕಾಣಿಸಿಕೊಂಡ ಪ್ರೇತಗಳು, ಬೆಚ್ಚಿಬಿದ್ದ ಕೃಷ್ಣ ನಗರಿ ಮಂದಿ...! - ನವರಾತ್ರಿಯ ಪ್ರೇತ ವೇಷಧಾರಿಗಳು
ದಸರಾ ಪ್ರಯುಕ್ತ ವಿವಿಧ ವೇಷಧರಿಸಿ ಜನರು ರಸ್ತೆ ಉದ್ದಕ್ಕೂ ಮೆರವಣಿಗೆ ತೆರಳುವುದು ಸಾಮಾನ್ಯ. ಹಾಗೆ ಪ್ರೇತ ವೇಷಧಾರಿಗಳು ಕಾರ್ಕಳದಲ್ಲಿ ರಸ್ತೆಯಲ್ಲಿ ತಿರುಗಾಡಿದ್ದು ಅಲ್ಲಿದ್ದ ಸಾರ್ವಜನಿಕರನ್ನು ಕ್ಷಣಕಾಲ ನಿಬ್ಬೆರಗಾಗಿಸಿತ್ತು.
![ಹಗಲಿನಲ್ಲಿಯೇ ಕಾಣಿಸಿಕೊಂಡ ಪ್ರೇತಗಳು, ಬೆಚ್ಚಿಬಿದ್ದ ಕೃಷ್ಣ ನಗರಿ ಮಂದಿ...!](https://etvbharatimages.akamaized.net/etvbharat/prod-images/768-512-4686806-thumbnail-3x2-udp.jpg)
ಹಗಲಿನಲ್ಲಿಯೇ ಕಾಣಿಸಿಕೊಂಡ ಪ್ರೇತಗಳು...!
ಹಗಲಿನಲ್ಲಿಯೇ ಕಾಣಿಸಿಕೊಂಡ ಪ್ರೇತಗಳು...!
ಹೌದು, ನವರಾತ್ರಿ ಆರಂಭವಾಗುತ್ತಿದ್ದಂತೆ ಜನರು ವಿವಿಧ ವೇಷ ಧರಿಸಿ ರಸ್ತೆ ಉದ್ದಕ್ಕೂ ಮೆರವಣಿಗೆ ತೆರಳುವುದು ಸಾಮಾನ್ಯ. ಹಾಗೆ ಈ ನವರಾತ್ರಿಯ ವೇಷಧಾರಿಗಳು ಈ ಬಾರಿ ವಿಭಿನ್ನ ವೇಷಧರಿಸಿ ರಸ್ತೆಯಲ್ಲಿ ತಿರುಗಾಡಿದ್ದು, ದಿಢೀರ್ ಹತ್ತಿರದಿಂದ ಪ್ರೇತ ವೇಷಧಾರಿಗಳನ್ನು ಕಂಡು ಅದೆಷ್ಟೋ ಮಂದಿ ಹೆದರಿದ್ದಂತು ಸುಳ್ಳಲ್ಲ.