ಕರ್ನಾಟಕ

karnataka

ಉಡುಪಿ: ಸಾಲಬಾಧೆ ತಾಳಲಾರದೆ ವ್ಯಕ್ತಿ ನೇಣಿಗೆ ಶರಣು

By

Published : Sep 17, 2020, 12:40 PM IST

ಮಣಿಪಾಲದಲ್ಲಿ ಟ್ಯಾಕ್ಸಿ ಚಾಲಕನಾಗಿರುವ ಕುಂದಾಪುರ ಮೂಲದ ರಾಘವೇಂದ್ರ ಸಾಲ ಮಾಡಿ‌ ಮಣಿಪಾಲದ ಸುವಿಧ ಅಪಾರ್ಟ್​​ಮೆಂಟ್​ನಲ್ಲಿ ಮನೆಯನ್ನು ಖರೀದಿಸಿದ್ದರು. ಲಾಕ್​​ಡೌನ್ ಹಿನ್ನೆಲೆಯಲ್ಲಿ ದುಡಿಮೆಯಿಲ್ಲದೆ ಬ್ಯಾಂಕ್ ಸಾಲ ಹೊರೆಯಾಗಿ‌ ಪರಿಣಮಿಸಿದ್ದು, ಆತ್ಮಹತ್ಯೆಗೆ ಶರಣಾಗಿದ್ದಾರೆ‌.

Man committed suicide in udupi
ಉಡುಪಿ: ಸಾಲ ತೀರಿಸಲಾಗದೆ ವ್ಯಕ್ತಿ ನೇಣಿಗೆ ಶರಣು

ಉಡುಪಿ: ಮನೆ ಸಾಲ ಕಟ್ಟಲಾಗದೆ ವ್ಯಕ್ತಿಯೋರ್ವ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.‌

ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಮಣಿಪಾಲದಲ್ಲಿ ಟ್ಯಾಕ್ಸಿ ಚಾಲಕನಾಗಿರುವ ಕುಂದಾಪುರ ಮೂಲದ ರಾಘವೇಂದ್ರ ಮೃತ ದುರ್ದೈವಿ. ಬ್ಯಾಂಕ್​​ನಲ್ಲಿ ಸಾಲ ಮಾಡಿ‌ ಮಣಿಪಾಲದ ಸುವಿಧ ಅಪಾರ್ಟ್​​ಮೆಂಟ್​ನಲ್ಲಿ ಮನೆಯನ್ನು ಖರೀದಿಸಿದ್ದ ರಾಘವೇಂದ್ರನಿಗೆ ಲಾಕ್​​ಡೌನ್ ಹಿನ್ನಲೆಯಲ್ಲಿ ದುಡಿಮೆಯಿಲ್ಲದೆ ಬ್ಯಾಂಕ್ ಸಾಲ ಹೊರೆಯಾಗಿ‌ ಪರಿಣಮಿಸಿದೆ. ‌ ಹೀಗಾಗಿ ಬ್ಯಾಂಕ್ ಸಾಲ ಕಟ್ಟಲಾಗದೆ‌ ಖಿನ್ನತೆಗೊಳಪಟ್ಟಿದ್ದ ರಾಘವೇಂದ್ರ ಅಪಾರ್ಟ್​​ಮೆಂಟಿನ ಟೆರೆಸ್​​ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details