ಕರ್ನಾಟಕ

karnataka

ETV Bharat / state

ವರುಣನ ರೌದ್ರನರ್ತನ: ಉಡುಪಿಯಲ್ಲಿ ಎನ್​ಡಿಆರ್​ಎಫ್ ಕಾರ್ಯಾಚರಣೆ ಚುರುಕು - ಮಳೆ ಸುದ್ದಿ 2020

ಉಡುಪಿ ಜಿಲ್ಲೆಯಾದ್ಯಂತ ವರುಣನ ಅಬ್ಬರ ಜೋರಾಗಿದ್ದು, ಹಲವಾರು ಕುಟುಂಬಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ಎನ್​ಡಿಆರ್‌ಎಫ್ ತೊಡಗಿದೆ.

ಎನ್​ಡಿಆರ್​ಎಫ್ ತಂಡದಿಂದ ಕಾರ್ಯಾಚರಣೆ
ಎನ್​ಡಿಆರ್​ಎಫ್ ತಂಡದಿಂದ ಕಾರ್ಯಾಚರಣೆ

By

Published : Sep 20, 2020, 2:27 PM IST

ಉಡುಪಿ: ವರುಣನ ರೌದ್ರ ನರ್ತನ ಜೋರಾಗಿರುವ ಹಿನ್ನೆಲೆಯಲ್ಲಿ ದೊಡ್ಡಣಗುಡ್ಡೆ, ಪೆರಂಪಳ್ಳಿ ಪ್ರದೇಶದಲ್ಲಿ ಎನ್​ಡಿಆರ್‌ಎಫ್ ಕಾರ್ಯಾಚರಣೆ ನಡೆಸುತ್ತಿದೆ. ಮೋಟಾರ್ ಬೋಟ್ ಬಳಸಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಪಾಸ್ಕ್ ಕುದ್ರುವಿನಲ್ಲಿನ ಕುಟುಂಬಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ಎನ್​ಡಿಆರ್‌ಎಫ್ ತಂಡ ನಿರತವಾಗಿದೆ. ಉಡುಪಿಯ ಪೆರಂಪಳ್ಳಿಯಲ್ಲಿ ಸುವರ್ಣ ನದಿಯ ರೌದ್ರ ನರ್ತನ ಮಿತಿಮೀರಿದೆ. ಹಲವಾರು ದ್ವೀಪಗಳನ್ನು ಮುಳುಗಿಸಿರುವ ಸುವರ್ಣಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ.

ಹತ್ತನೇ ಬೆಟಾಲಿಯನ್ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಟೀಮ್ ಕಮಾಂಡರ್ ಗೋಪಾಲ್ ಮೀನಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಹೆಚ್ಚಿನ ನೆರವಿಗಾಗಿ ಎರಡು ಹೆಲಿಕಾಪ್ಟರುಗಳನ್ನು ಕೇಂದ್ರ ಸರ್ಕಾರ ರವಾನಿಸಿದೆ. ಕಾರವಾರದಿಂದ ಉಡುಪಿಗೆ ಬರಲಿರುವ ಹೆಲಿಕಾಪ್ಟರ್​ಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಲಿವೆ.

ABOUT THE AUTHOR

...view details