ಕರ್ನಾಟಕ

karnataka

By

Published : Jul 22, 2020, 1:09 PM IST

ETV Bharat / state

ಉಡುಪಿ ಮಾರುಕಟ್ಟೆಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ದಿಢೀರ್ ಭೇಟಿ

ಉಡುಪಿ ನಗರದ ಅಂಗಡಿ ಮಳಿಗೆಗಳಿಗೆ ಇಂದು ಜಿಲ್ಲಾಧಿಕಾರಿ ಜಿ. ಜಗದೀಶ್ ದಿಢೀರ್ ಭೇಟಿ ನೀಡಿ, ಪರಿಶೀಲಿಸಿದರು.

G. Jagadish District Collector of Udupi Visit market
ಉಡುಪಿ ಮಾರುಕಟ್ಟೆಗೆ ಜಿಲ್ಲಾಧಿಕಾರಿ ಜಿ. ಜಗಧೀಶ್ ದಿಢೀರ್ ಭೇಟಿ

ಉಡುಪಿ: ನಗರದ ಅಂಗಡಿ ಮಳಿಗೆಗಳಿಗೆ ಇಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ದಿಢೀರ್ ಭೇಟಿ ನೀಡಿದರು.

ಉಡುಪಿ ಮಾರುಕಟ್ಟೆಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ದಿಢೀರ್ ಭೇಟಿ

ಉಡುಪಿಯ ಸರ್ವಿಸ್ ಬಸ್ ನಿಲ್ದಾಣ, ಸಂಸ್ಕೃತ ಕಾಲೇಜು ರಸ್ತೆ, ಮಸೀದಿ ರಸ್ತೆಯ ಅಂಗಡಿಗಳಿಗೆ ಭೇಟಿ ನೀಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳದ, ಮಾಸ್ಕ್ ಧರಿಸದವರ ವಿರುದ್ಧ ಗರಂ ಆದ ಪ್ರಸಂಗ ನಡೆಯಿತು.

ಮಾಸ್ಕ್ ಧರಿಸದವರಿಗೆ ಸ್ಥಳದಲ್ಲೇ ದಂಡ ವಿಧಿಸುವಂತೆ ಜಿಲ್ಲಾಧಿಕಾರಿ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ್ರು. ಕೆಲ ಯುವಕರು ಜಿಲ್ಲಾಧಿಕಾರಿಗಳನ್ನು ನೋಡಿ ಸ್ಥಳದಿಂದ ಕಾರು, ಬೈಕ್ ನಲ್ಲಿ ಪರಾರಿಯಾದರೆ ಮಾಸ್ಕ್ ಹಾಕದ ಕೆಲ ಸಾರ್ವಜನಿಕರು ಸ್ಥಳದಲ್ಲೇ ದಂಡ ನೀಡಬೇಕಾಯ್ತು. ಈ ವೇಳೆ ಕೋವಿಡ್ 19 ಸುರಕ್ಷತೆ ದೃಷ್ಟಿಯಿಂದ ನಿಯಮಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಅಂಗಡಿ ಮಾಲೀಕರಿಗೆ ಖಡಕ್ ಸೂಚನೆ ನೀಡಿದರು.

ABOUT THE AUTHOR

...view details