ಉಡುಪಿ: ವಿದ್ಯುತ್ ಕಂಬದಿಂದ ತಂತಿ ಹರಿದು ಬಿದ್ದು, ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತನೋರ್ವ ಮೃತಪಟ್ಟ ಘಟನೆ ಸಂಭವಿಸಿದೆ.
ಉಡುಪಿ: ವಿದ್ಯುತ್ ತಂತಿ ಹರಿದು ಬಿದ್ದು ರೈತ ಸಾವು - ವಿದ್ಯುತ್ ತಗುಲಿ ಚೇರ್ಕಾಡಿ ರೈತ ಸಾವು
ವಿದ್ಯುತ್ ಕಂಬದಿಂದ ತಂತಿ ಹರಿದು ಬಿದ್ದ ಪರಿಣಾಮ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತನೋರ್ವ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ಜರುಗಿದೆ. ಸಾಧು (70) ಮೃತ ರೈತ. ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ಹತ್ತಿರದಲ್ಲೇ ಇದ್ದ ವಿದ್ಯುತ್ ಕಂಬದ ತಂತಿ ಹರಿದು ಬಿದ್ದು ಮೃತಪಟ್ಟಿದ್ದಾರೆ.

ರೈತ ಸಾವು
ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮದ ಜಾರ್ ಜೆಡ್ಡು ಎಂಬಲ್ಲಿ ಈ ಅನಘಡ ಸಂಭವಿಸಿದೆ. ಸಾಧು (70) ಮೃತ ರೈತ. ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ಹತ್ತಿರದಲ್ಲೇ ಇದ್ದ ವಿದ್ಯುತ್ ಕಂಬದ ತಂತಿ ಹರಿದು ಬಿದ್ದಿದೆ. ಇದರ ಪರಿಣಾಮ ವಿದ್ಯುತ್ ತಗುಲಿ ರೈತ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.