ಕರ್ನಾಟಕ

karnataka

ETV Bharat / state

ಚಿತ್ರಮಂದಿರ​​ ತೆರೆದರೂ ಬಾರದ ಪ್ರೇಕ್ಷಕ: ಕೋವಿಡ್​​ಗೆ ಹೆದರಿ ಮನೆಯಲ್ಲಿಯೇ ಕುಳಿತರಾ ಜನ..! - ಕರ್ನಾಟಕ ಚಿತ್ರಮಂದಿರ ಪ್ರಾರಂಭ

ಮೊದಲು ದಿನವಾದ ಇಂದು ಕಲ್ಪನಾ ಥಿಯೇಟರ್​ಗೆ 40 ಜನ ಇನ್ಸ್‌ಪೆಕ್ಟರ್ ವಿಕ್ರಂನನ್ನು ನೋಡೋದಕ್ಕೆ ಬಂದಿದ್ದರು. ಶುಚಿತ್ವ, ಕೋವಿಡ್ ನಿಯಮ ಪಾಲಿಸಲಾಗಿದೆ. ಚಿತ್ರ ಮಂದಿರದೊಳಗಿನ ಅಂಗಡಿಗಳಿಗೂ ಹೊಸ ಟಚ್ ಕೊಡಲಾಗಿದೆ.

due-to-corona-virus-people-not-coming-to-theater
ಚಿತ್ರಮಂದಿರ​​

By

Published : Feb 5, 2021, 3:20 PM IST

ಉಡುಪಿ: ಹೌಸ್ ಫುಲ್ ಚಿತ್ರಪ್ರದರ್ಶನಕ್ಕೆ ರಾಜ್ಯ ಸರ್ಕಾರ ಅನುಮತಿ ಕೊಟ್ಟಿದೆ. ಉಡುಪಿಯಲ್ಲಿ ಎಲ್ಲ ಚಿತ್ರಮಂದಿರಗಳು ಓಪನ್ ಆಗಿವೆ. 11 ತಿಂಗಳ ನಂತರ ಥಿಯೇಟರ್​ಗಳು ತೆರೆದುಕೊಂಡರೂ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಚಿತ್ರಮಂದಿರ​​ ತೆರೆದರು ಬಾರದ ಪ್ರೇಕ್ಷಕ

ಮೊದಲು ದಿನವಾದ ಇಂದು ಕಲ್ಪನಾ ಥಿಯೇಟರ್​ಗೆ 40 ಜನ ಇನ್ಸ್‌ಪೆಕ್ಟರ್ ವಿಕ್ರಂನನ್ನು ನೋಡೋದಕ್ಕೆ ಬಂದಿದ್ದರು. ಶುಚಿತ್ವ, ಕೋವಿಡ್ ನಿಯಮ ಪಾಲಿಸಲಾಗಿದೆ. ಚಿತ್ರ ಮಂದಿರದೊಳಗಿನ ಅಂಗಡಿಗಳಿಗೂ ಹೊಸ ಟಚ್ ಕೊಡಲಾಗಿದೆ.

ಓದಿ-ಚಿತ್ರಮಂದಿರಗಳಲ್ಲಿ ಶೇ.100‌ ಪ್ರೇಕ್ಷಕರಿಗೆ ಅನುಮತಿ...ಮೊದಲ ದಿನದ ಸಂಭ್ರಮ ಹೇಗಿತ್ತು...?

ನಗರದ ಅಲಂಕಾರ್ ಚಿತ್ರ ಮಂದಿರಕ್ಕೆ ಶ್ಯಾಡೋ ಲಗ್ಗೆಯಿಟ್ಟಿದೆ. ಚಿತ್ರಕ್ಕೆ ಸ್ಟೇ ಬಂದಿರೋದರಿಂದ ಮಾರ್ನಿಂಗ್ ಶೋ ರದ್ದಾಗಿದೆ. ಈ ಬೆಳವಣಿಗೆ ಥಿಯೇಟರ್ ಮಾಲೀಕರಿಗೆ ಮತ್ತು ಜನರಿಗೆ ನಿರಾಸೆಯಾಗಿದೆ.

ಸ್ಟಾರ್ ಕಾಸ್ಟ್ ಇರೊ ಚಿತ್ರ ರಿಲೀಸಾದ್ರೆ ಬ್ಯುಸಿನೆಸ್ ಪಿಕಪ್ ಆಗುತ್ತೆ, ಜನ ಥಿಯೇಟರ್ ಕಡೆ ಬರ್ತಾರೆ ಅನ್ನೋ ನಂಬಿಕೆ ಮಾಲೀಕರಿಗಿದೆ. ಸುದೀಪ್ ,ದರ್ಶನ್ , ಯಶ್ ಶಿವರಾಜ್ ಕುಮಾರ್, ಪುನೀತ್, ಧೃವ ಸರ್ಜಾ ಚಿತ್ರಗಳು ಬರಬೇಕು ಅಂತ ಚಿತ್ರ ಪ್ರೇಕ್ಷಕರು ಕಾಯುತ್ತಿದ್ದಾರೆ.

ABOUT THE AUTHOR

...view details