ಕರ್ನಾಟಕ

karnataka

ETV Bharat / state

ಯುಕ್ರೇನ್​​ನಿಂದ​​ ಮರಳಿದ ವಿದ್ಯಾರ್ಥಿ ಮನೆಗೆ ಉಡುಪಿ ಡಿಸಿ ಭೇಟಿ - ಯುಕ್ರೇನ್​​ನಿಂದ​​ ಮರಳಿದ ವಿದ್ಯಾರ್ಥಿ ಮನೆಗೆ ಡಿಸಿ ಕೂರ್ಮ ರಾವ್ ಭೇಟಿ

ಯುಕ್ರೇನ್​​ನಿಂದ​​ ಹಿಂದಿರುಗಿದ ಉಡುಪಿ ವಿದ್ಯಾರ್ಥಿಯ ಮನೆಗೆ ಜಿಲ್ಲಾಧಿಕಾರಿ ಕೂರ್ಮ ರಾವ್ ಭೇಟಿ ನೀಡಿ ಮಾತುಕತೆ ನಡೆಸಿದರು.

DC Khurma Rao visited udupi student home
ಯುಕ್ರೇನ್​​ನಿಂದ​​ ಮರಳಿದ ವಿದ್ಯಾರ್ಥಿ ಮನೆಗೆ ಡಿಸಿ ಕೂರ್ಮ ರಾವ್ ಭೇಟಿ

By

Published : Mar 6, 2022, 9:14 AM IST

ಉಡುಪಿ: ಯುಕ್ರೇನ್​​ನಿಂದ ತಾಯ್ನಾಡಿಗೆ ಮರಳಿದ ವಿದ್ಯಾರ್ಥಿ ರೋಹನ್ ಅವರ ಮನೆಗೆ ಜಿಲ್ಲಾಧಿಕಾರಿ ಕೂರ್ಮ ರಾವ್ ಭೇಟಿ ನೀಡಿದರು.

ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿರುವ ವಿದ್ಯಾರ್ಥಿಯ ತಂದೆ ಕೃಷಿ ವಿಜ್ಞಾನಿ ಡಾ.ಧನಂಜಯ್ ಅವರ ಜತೆ ಮಾತುಕತೆ ನಡೆಸಿದರು. ಇದೇ ವೇಳೆ, ವಿದ್ಯಾರ್ಥಿಗೆ ಸ್ಮರಣಿಕೆ ನೀಡಿದರು.


ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ, ರೋಹನ್ ಜತೆ ಮಾತನಾಡಿ ವಿವರ ಪಡೆದಿದ್ದೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕ್ರಮವನ್ನು ಅವರು ಶ್ಲಾಘಿಸಿದ್ದಾರೆ. ಎಲ್ಲ ವಿದ್ಯಾರ್ಥಿಗಳು ಇದೇ ರೀತಿ ಸುರಕ್ಷಿತವಾಗಿ ಬರಬೇಕು ಎಂದು ಹಾರೈಸಿದರು.

ಉಡುಪಿ ಜಿಲ್ಲೆಯ ಒಟ್ಟು 7 ಮಂದಿ ಯುಕ್ರೇನ್​​ನಲ್ಲಿ ಸಿಲುಕಿದ್ದರು. ಇವರ ಪೈಕಿ 5 ಮಂದಿ ಮರಳಿದ್ದಾರೆ. ಉಳಿದಿರುವ ಇಬ್ಬರ ಪೈಕಿ ಓರ್ವ ವಿದ್ಯಾರ್ಥಿನಿ ಗಡಿ ಪ್ರದೇಶ ತಲುಪಿದ್ದಾರೆ. ಮತ್ತೋರ್ವ ವಿದ್ಯಾರ್ಥಿ ಖಾರ್ಕಿವ್ ಪಟ್ಟಣದ ಹೊರವಲಯದ ಸುರಕ್ಷಿತ ಸ್ಥಳದಲ್ಲಿದ್ದಾರೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ:ಉಕ್ರೇನ್​ನಿಂದ ಸುರಕ್ಷಿತವಾಗಿ ವಾಪಸಾದ ಹಾಸನದ ವೈದ್ಯಕೀಯ ವಿದ್ಯಾರ್ಥಿ

For All Latest Updates

ABOUT THE AUTHOR

...view details