ಕರ್ನಾಟಕ

karnataka

ETV Bharat / state

ಮಲ್ಪೆಯಲ್ಲಿ ವ್ಯಕ್ತಿ ಮೇಲೆ ತಲವಾರಿನಿಂದ ದಾಳಿ, ಆರೋಪಿಗಳು ಪರಾರಿ - ಗಂಭೀರ

ಮೀನು ವ್ಯಾಪಾರಕ್ಕೆ ಮಲ್ಪೆಗೆ ಬಂದಿದ್ದ ರಿಯಾಜ್‌​ ಎಂಬಾತನ ಮೇಲೆ, ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ ದುಷ್ಕರ್ಮಿಗಳ ತಂಡ ತಲವಾರಿನಿಂದ ಹಿಗ್ಗಾಮುಗ್ಗಾ ದಾಳಿ ನಡೆಸಿದೆ.

ಹಲ್ಲೆಗೊಳಗಾದ ವ್ಯಕ್ತಿ

By

Published : Jun 7, 2019, 7:11 PM IST

ಉಡುಪಿ:ಮಲ್ಪೆ ಬಂದರಿನಲ್ಲಿ ವ್ಯಕ್ತಿಯ ಮೇಲೆ ದುಷ್ಕರ್ಮಿಗಳಂತಡ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಘಟನೆ ನಡೆದಿದೆ.

ಮಂಗಳೂರಿನ ಫರಂಗಿಪೇಟೆಯ ಮೀನು ವ್ಯಾಪಾರಿ ರಿಯಾಜ್ (34) ದಾಳಿಗೊಳಗಾದ ಯುವಕ.

4 ಜನ ದುಷ್ಕರ್ಮಿಗಳಿಂದ ದಾಳಿ ನಡೆದಿದ್ದು, ಪ್ರಾಣಾಪಾಯದಿಂದ ಪಾರಾಗಿರುವ ರಿಯಾಜ್‌ ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೀನು ವ್ಯಾಪಾರಕ್ಕೆ ಬಂದಿದ್ದ ರಿಯಾಜ್‌​ ಮೇಲೆ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ ದುಷ್ಕರ್ಮಿಗಳು, ಮಲ್ಪೆ ಬಂದರಿನ ಸಮೀಪ ತಲವಾರಿನಿಂದ ಹಿಗ್ಗಾಮುಗ್ಗಾ ದಾಳಿ ನಡೆಸಿದ್ದಾರೆ.

ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ABOUT THE AUTHOR

...view details