ಕರ್ನಾಟಕ

karnataka

ETV Bharat / state

ಎದೆಯಲ್ಲಿ ಸರ್ಪಸುತ್ತು ಇದೆ ಎಂದು ಜ್ಯೋತಿಷಿಗೇ ಹನಿಟ್ರ್ಯಾಪ್​ ಖೆಡ್ಡಾ ತೋಡಿದ್ಲು... ಮುಂದೇನಾಯ್ತು? - KN-UDP-26-Honey trap-arrest-vls-byte-7202200-harsha-avb

ಜಿಲ್ಲೆಯ‌ ಹೆಬ್ರಿ‌ ತಾಲೂಕಿನಲ್ಲಿ ಹನಿಟ್ರ್ಯಾಪ್ ಮೂಲಕ ಜ್ಯೋತಿಷಿಯನ್ನ ಬ್ಲ್ಯಾಕ್​ಮೇಲ್ ಮಾಡಲು ಯತ್ನಿಸಿದ್ದ ಇಬ್ಬರನ್ನ ಹೆಬ್ರಿ ಪೊಲೀಸರು ಬಂಧಿಸಿದ್ದಾರೆ.

ಹನಿಟ್ರ್ಯಾಪ್​ ಮೂಲಕ ಜ್ಯೋತಿಷಿಗೆ ಬ್ಲಾಕ್​ಮೇಲ್..ಇಬ್ಬರ ಬಂಧನ​

By

Published : Jul 26, 2019, 8:25 AM IST

ಉಡುಪಿ:ಜಿಲ್ಲೆಯ‌ ಹೆಬ್ರಿ‌ ತಾಲೂಕಿನಲ್ಲಿ ಹನಿಟ್ರ್ಯಾಪ್ ಮೂಲಕ ಜ್ಯೋತಿಷಿಯನ್ನ ಬ್ಲ್ಯಾಕ್​ಮೇಲ್ ಮಾಡಲು ಯತ್ನಿಸಿದ್ದ ಇಬ್ಬರನ್ನ ಹೆಬ್ರಿ ಪೊಲೀಸರು ಬಂಧಿಸಿದ್ದಾರೆ.

ಹನಿಟ್ರ್ಯಾಪ್​ ಮೂಲಕ ಜ್ಯೋತಿಷಿಗೆ ಬ್ಲಾಕ್​ಮೇಲ್..ಇಬ್ಬರ ಬಂಧನ​

ರಮೇಶ್‌‌ ಭಟ್ ಎಂಬುವರು ಬ್ಲ್ಯಾಕ್ ಮೇಲ್​ಗೆ ಒಳಗಾಗಿರುವ ಜ್ಯೋತಿಷಿ. ಹೆಬ್ರಿ ತಾಲೂಕು ಬೆಳಿಂಜೆ ಗ್ರಾಮದ ಸುಮಾ ಹಾಗೂ ಕಿರಣ್ ಬಂಧಿತ ಆರೋಪಿಗಳು. ಈ ದಂಪತಿ ಸುಮಾ ಎಂಬುವಳನ್ನು ಜ್ಯೋತಿಷಿ ರಮೇಶ್​ ಬಳಿ ಕಳಿಸಿದ್ದರು. ಈಕೆ ಜ್ಯೋತಿಷಿ ಬಳಿ ತೆರಳಿ ಎದೆಯಲ್ಲಿ‌ ಸರ್ಪಸುತ್ತು ಇದೆಯೆಂದು ಹೇಳಿದ್ದಳು. ಆಗ ಜ್ಯೋತಿಷಿ ರಮೇಶ್​ ಮೈಮುಟ್ಟಿ ಪರೀಕ್ಷೆ ನಡೆಸಿದ ದೃಶ್ಯವನ್ನ ವ್ಯಾನಿಟಿ ಬ್ಯಾಗ್​ನಲ್ಲಿದ್ದ ಮೊಬೈಲ್​ನಲ್ಲಿ ಸೆರೆಹಿಡಿದಿದ್ದಳು. ಬಳಿಕ‌ ಈ ವಿಡಿಯೋ‌ ಜ್ಯೋತಿಷಿಗೆ ತೋರಿಸಿ 40 ಲಕ್ಷ ಹ‌ಣಕ್ಕೆ ಬೇಡಿಕೆಯಿಟ್ಟು ಬ್ಲ್ಯಾಕ್​ಮೇಲ್ ಮಾಡಲು ಮುಂದಾಗಿದ್ದಳು ಎಂದು ಪೊಲೀಸರು ವಿವರಿಸಿದ್ದಾರೆ.

ಇದರಿಂದ ಆತಂಕಗೊಂಡ‌ ಜ್ಯೋತಿಷಿ ರಮೇಶ್​ ಭಟ್​ ಅವರು ಹೆಬ್ರಿ‌ ಪೊಲೀಸ್ ಠಾಣೆಗೆ ದೂರು‌ ನೀಡಿದ್ದರು. ಕೂಡಲೇ‌ ಸುಮಾ ಹಾಗೂ ಈಕೆಯ ಪತಿ ರಾಘವೇಂದ್ರನನ್ನ ವಿಚಾರಣೆ‌ ನಡೆಸಿದಾಗ ಆರೋಪಿ‌ ಸುಮಾ, ತನ್ನ ದೂರದ ಸಂಬಂಧಿ ಕಿರಣ್ ಹಾಗೂ ಆತನ ಪತ್ನಿ ಲಕ್ಷ್ಮೀ ಈ ಕೃತ್ಯವನ್ನು ತನ್ನಿಂದ ಮಾಡಿಸಿದ್ದಾರೆ ಎಂದು ಬಾಯ್ಬಿಟ್ಟಿದ್ದಾಳೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಸದ್ಯ, ಸುಮಾ ಹಾಗೂ ಕಿರಣ್​​ನನ್ನ ಬಂಧಿಸಿದ್ದು, ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್​, ಚಾಕು, ಕತ್ತಿ ಹಾಗೂ ಹಣವನ್ನ ಹೆಬ್ರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

For All Latest Updates

TAGGED:

ABOUT THE AUTHOR

...view details