ಕರ್ನಾಟಕ

karnataka

By

Published : Jun 24, 2020, 7:57 PM IST

ETV Bharat / state

ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗೆ ಷರತ್ತುಬದ್ಧ ಜಾಮೀನು

ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಲ್ಲಿ ಒಬ್ಬನಾದ ನಿರಂಜನ್ ಭಟ್​ಗೆ ಜಿಲ್ಲಾ ಸೆಷನ್ಸ್​ ಕೋರ್ಟ್ ಶರತ್ತುಬದ್ಧ ಜಾಮೀನು ನೀಡಿದೆ.

dsdd
ನಿರಂಜನ್ ಭಟ್​ಗೆ ಜಾಮೀನು

ಉಡುಪಿ: 4 ವರ್ಷಗಳ ಹಿಂದೆ ಕರಾವಳಿಯನ್ನು ತಲ್ಲಣಗೊಳಿಸಿದ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಲ್ಲಿ ಒಬ್ಬನಾದ ನಿರಂಜನ್ ಭಟ್​ಗೆ ಜಿಲ್ಲಾ ಸೆಷನ್ಸ್​ ಕೋರ್ಟ್ ಇಂದು ಶರತ್ತುಬದ್ಧ ಜಾಮೀನು ನೀಡಿದೆ.

2016 ಜುಲೈ 28ರಂದು ಉದ್ಯಮಿಯನ್ನು ಪತ್ನಿ ರಾಜೇಶ್ವರಿ ಶೆಟ್ಟಿ ಮತ್ತು ಮಗನೊಂದಿಗೆ ಸೇರಿ ನಿರಂಜನ್​ ಭಟ್​ ಕೊಲೆ ಮಾಡಿ ಸುಟ್ಟು ಹಾಕಿದ್ದ ಆರೋಪ ಎದುರಿಸುತ್ತಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿರಂಜನ ಭಟ್​ ತಂದೆ ಶ್ರೀನಿವಾಸ ಭಟ್​ ಮತ್ತು ಕಾರು ಚಾಲಕ ಸೇರಿ 5 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು.

ಮುಖ್ಯ ಆರೋಪಿ ರಾಜೇಶ್ವರಿ ಶೆಟ್ಟಿ ಈಗಾಗಲೇ ಜಾಮೀನು ಪಡೆದಿದ್ದು, ಭಾಸ್ಕರ್ ಶೆಟ್ಟಿ ಮಗ ನವನೀತ್ ಶೆಟ್ಟಿಗೆ ಜಾಮೀನು ದೊರೆಯಬೇಕಿದೆ. ನಿರಂಜನ ಭಟ್​ನ ತಂದೆ ಶ್ರೀನಿವಾಸ ಭಟ್​ 2 ದಿನದ ಹಿಂದೆ ಅನಾರೋಗ್ಯದಿಂದ ಮೃತಪಟ್ಟ ಹಿನ್ನೆಲೆ ನಿರಂಜನ್​ಗೆ ಜಿಲ್ಲಾ ನ್ಯಾಯಾಲಯ ಜುಲೈ 7ರ ತನಕ ಷರತ್ತುಬದ್ಧ ಜಾಮೀನು ನೀಡಿದೆ.

ABOUT THE AUTHOR

...view details