ಕರ್ನಾಟಕ

karnataka

By

Published : Apr 28, 2020, 7:42 AM IST

ETV Bharat / state

ಅಷ್ಟಮಿಗೂ ಮೊದಲೇ ಉಡುಪಿಯಲ್ಲಿ ಕಾಣಿಸಿಕೊಂಡ ಕೊರೊನಾಸುರ ವೇಷಧಾರಿ: ಜನರಲ್ಲಿ ಅಚ್ಚರಿ!

ಉಡುಪಿ ಜಿಲ್ಲಾ ನಾಗರಿಕ ಸಮಿತಿಯವರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು, "ಕೊರೊನಾಸುರ ಅಟ್ಟಹಾಸ" ಎನ್ನುವ ಅಣಕು ಪ್ರದರ್ಶನ ಹಮ್ಮಿಕೊಂಡಿದ್ದರು.

Awareness by Corona Disguise in Udupi
ಉಡುಪಿಯಲ್ಲಿ ಕಾಣಿಸಿಕೊಂಡ ಕೊರೊನಾಸುರ : ಜನರಲ್ಲಿ ಅಚ್ಚರಿ!

ಉಡುಪಿ: ನಗರದ ಜನತೆಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಕೊರೊನಾ ವೈರೆಸ್​​ ರೀತಿಯ ಉಡುಪನ್ನು ಧರಿಸಿ ಜನರಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಕೊರೊನಾ ಬಗ್ಗೆ ಜಾಗೃತಿ

ನಗರದಲ್ಲಿ ಅಷ್ಟಮಿ ಸಮಯದಲ್ಲಿ ಮಾತ್ರ ಈ ರೀತಿಯ ವೇಷಗಳು ಕಾಣಿಸಿಕೊಳ್ಳುತ್ತವೆ. ಆದ್ರೆ ಇದೀಗ ಆಕಸ್ಮಿಕರವಾಗಿ ಕಾಣಿಸಿಕೊಂಡ ಕೊರೊನಾ ವೇಷಧಾರಿ ಸಾಮಗ್ರಿಗಳನ್ನು ಕೊಳ್ಳಲು ಬಂದಿದ್ದ ಜನರಲ್ಲಿ ಅಚ್ಚರಿ ಮೂಡಿಸಿದೆ.

ಕೊರೊನಾ ಬಗ್ಗೆ ಜಾಗೃತಿ

ಉಡುಪಿ ಜಿಲ್ಲಾ ನಾಗರಿಕ ಸಮಿತಿಯವರು ಸಾರ್ವಜನಿಕರಲ್ಲಿ ಜಾಗ್ರತಿ ಮೂಡಿಸಲು, "ಕೊರೊನಾಸುರ ಅಟ್ಟಹಾಸ" ಎನ್ನುವ ಅಣಕು ಪ್ರದರ್ಶನ ಮಾಡಿದ್ದರು. ಕೊರೊನಾಸುರ ವೇಷವನ್ನು ನಾಗರಿಕ ಸಮಿತಿಯ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡು ಧರಿಸಿದ್ದರು.

ಕೊರೊನಾ ಬಗ್ಗೆ ಜಾಗೃತಿ

ಮುಖಕ್ಕೆ ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಯ್ದು ಕೊಳ್ಳುವಂತೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಯು ಹೊರಡಿಸಿರುವ ಆರೋಗ್ಯ ಸುರಕ್ಷಾ ವಿಧಾನಗಳನ್ನು ಪಾಲಿಸುವಂತೆ ನಿತ್ಯಾನಂದ ಒಳಕಾಡು ಅರಿವು ಮೂಡಿಸಿದರು.

ABOUT THE AUTHOR

...view details