ಕರ್ನಾಟಕ

karnataka

By

Published : Sep 21, 2020, 8:40 PM IST

ETV Bharat / state

ತುಮಕೂರು: 296 ಮಂದಿ ಸೋಂಕಿನಿಂದ ಗುಣಮುಖ: ಏಳು ಜನ ಸೋಂಕಿಗೆ ಬಲಿ

ತುಮಕೂರು ಜಿಲ್ಲೆಯಲ್ಲಿ ಇಂದು 183 ಜನರಿಗೆ ಸೋಂಕು ತಗುಲಿದ್ದು, 296 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು 7 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಮೃತರ ಸಂಖ್ಯೆ 210ಕ್ಕೆ ಏರಿಕೆಯಾಗಿದೆ.

ಜಿಲ್ಲಾಸ್ಪತ್ರೆ
ಜಿಲ್ಲಾಸ್ಪತ್ರೆ

ತುಮಕೂರು: ಜಿಲ್ಲೆಯಲ್ಲಿ ಇಂದು 183 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 11,115ಕ್ಕೆ ಏರಿಕೆಯಾಗಿದೆ.

ಇಂದು ತುಮಕೂರು ತಾಲೂಕಿನಲ್ಲಿ 92 ಮಂದಿಗೆ ಸೋಂಕು ತಗುಲಿದ್ದು, ಕೊರಟಗೆರೆ ತಾಲೂಕಿನಲ್ಲಿ 19 ಮಂದಿಗೆ, ಗುಬ್ಬಿ ತಾಲೂಕಿನಲ್ಲಿ 15 , ಪಾವಗಡ ತಾಲೂಕಿನಲ್ಲಿ 12, ತುರುವೇಕೆರೆ ತಾಲೂಕಿನಲ್ಲಿ 11, ಶಿರಾ ತಾಲೂಕಿನಲ್ಲಿ 9, ಮಧುಗಿರಿ ಮತ್ತು ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ತಲಾ 7, ಕುಣಿಗಲ್ ತಾಲೂಕಿನಲ್ಲಿ 6, ತಿಪಟೂರು ತಾಲೂಕಿನಲ್ಲಿ ಐವರಿಗೆ ಸೋಂಕು ತಗುಲಿದೆ.

ಇಂದು 296 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ 8824 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನೂ 2036 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 7 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಮೃತರ ಸಂಖ್ಯೆ 210ಕ್ಕೆ ಏರಿಕೆಯಾಗಿದೆ.

ABOUT THE AUTHOR

...view details