ಕರ್ನಾಟಕ

karnataka

By

Published : Jun 2, 2021, 8:02 PM IST

ETV Bharat / state

ಶ್ರೀ ಕಾಲಭೈರವ ದೇವಾಲಯದ ಹುಂಡಿ ಒಡೆದು ಹಣ ದೋಚಿದ ಖದೀಮರು

ಹುಂಡಿ ಒಡೆದು ಚೋರರು ಹಣ ದೋಚಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ದಬ್ಬೆಘಟ್ಟ ಗ್ರಾಮದ ಶ್ರೀ ಕಾಲಭೈರವ ದೇವಾಲಯದಲ್ಲಿ ನಡೆದಿದೆ.

theft-in-the-temple
ದೇವಾಲಯದ ಹುಂಡಿ ಒಡೆದು ಹಣ ದೋಚಿದ ಚೋರರು

ತುಮಕೂರು:ಜಿಲ್ಲೆಯ ತುರುವೇಕೆರೆ ತಾಲೂಕಿನ ದಬ್ಬೆಘಟ್ಟ ಗ್ರಾಮದ ಶ್ರೀ ಕಾಲಭೈರವ ದೇಗುಲದ ಹುಂಡಿ ಒಡೆದು ಖದೀಮರು ಹಣ ದೋಚಿದ್ದಾರೆ.

ಈ ಹಿಂದೆ ಯುಗಾದಿ ಸಂದರ್ಭದಲ್ಲಿ ನೂರಾರು ಭಕ್ತರು ಅಪಾರ ಪ್ರಮಾಣದ ಕಾಣಿಕೆ ಅರ್ಪಿಸಿದ್ದರು. ಆಗ ದೇವಾಲಯದಲ್ಲಿ ಕಳ್ಳತನ ನಡೆದಿತ್ತು. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ಬಂಧಿಸಿಲ್ಲ. ಅಷ್ಟರೊಳಗೆ ಮತ್ತೊಮ್ಮೆ ಈ ದೇಗುಲದಲ್ಲಿ ಕಳ್ಳತನವಾಗಿರುವುದರಿಂದ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ದೇವರ ಒಡವೆ ಹಾಗೂ ಪೂಜಾ ಸಾಮಗ್ರಿ ಮುಟ್ಟದ ಚೋರರು ಕೇವಲ ಹುಂಡಿ ಮಾತ್ರ ಒಡೆದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ್ದ ತುರುವೇಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

First Time: ಕೋವಿಡ್‌ನಿಂದ ಮೃತಪಟ್ಟ ಅನಾಥ ಶವಗಳ ಅಸ್ಥಿ ವಿಸರ್ಜಿಸಿದ ಸಚಿವ ​ಅಶೋಕ್​

ABOUT THE AUTHOR

...view details