ತುಮಕೂರು:ಜಿಲ್ಲೆಯ ತುರುವೇಕೆರೆ ತಾಲೂಕಿನ ದಬ್ಬೆಘಟ್ಟ ಗ್ರಾಮದ ಶ್ರೀ ಕಾಲಭೈರವ ದೇಗುಲದ ಹುಂಡಿ ಒಡೆದು ಖದೀಮರು ಹಣ ದೋಚಿದ್ದಾರೆ.
ಈ ಹಿಂದೆ ಯುಗಾದಿ ಸಂದರ್ಭದಲ್ಲಿ ನೂರಾರು ಭಕ್ತರು ಅಪಾರ ಪ್ರಮಾಣದ ಕಾಣಿಕೆ ಅರ್ಪಿಸಿದ್ದರು. ಆಗ ದೇವಾಲಯದಲ್ಲಿ ಕಳ್ಳತನ ನಡೆದಿತ್ತು. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ಬಂಧಿಸಿಲ್ಲ. ಅಷ್ಟರೊಳಗೆ ಮತ್ತೊಮ್ಮೆ ಈ ದೇಗುಲದಲ್ಲಿ ಕಳ್ಳತನವಾಗಿರುವುದರಿಂದ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.