ತುಮಕೂರು: ಪ್ರಸ್ತುತ ರಾಜಕೀಯ ಗೊಂದಲಗಳು ರಾಜ್ಯ ಸರ್ಕಾರದ ಆಡಳಿತ ಯಂತ್ರದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಈಗಿನ ರಾಜಕೀಯ ಗೊಂದಲ ಆಡಳಿತ ಯಂತ್ರಕ್ಕೆ ಧಕ್ಕೆ ತರಲ್ಲ: ಜಗದೀಶ್ ಶೆಟ್ಟರ್ - ಜಗದೀಶ್ ಶಟ್ಟರ್
ಮುಖಂಡರಲ್ಲಿ ಯಾವುದೇ ಸಮಸ್ಯೆಗಳು ಇದ್ದರೆ ಮುಖ್ಯಮಂತ್ರಿಗಳೊಂದಿಗೆ ಕುಳಿತು ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸೋಣ. ನಾಯಕತ್ವ ಬದಲಾವಣೆ ಕುರಿತು ಯಾರೂ ಕೂಡ ಪ್ರಸ್ತಾಪಿಸಿಲ್ಲ. ಉಮೇಶ್ ಕತ್ತಿ ಮತ್ತು ನಾವು ಒಂದೆಡೆ ಊಟಕ್ಕೆ ಸೇರಿದ್ದೆವು ಎಂದು ಸಚಿವ ಜಗದೀಶ್ ಶೆಟ್ಟರ್ ಅವರು ಸಿದ್ದಗಂಗಾ ಮಠಕ್ಕೆ ಭೇಟೆ ನೀಡಿ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾತನಾಡಿದರು.

ಪಸ್ತುತ ರಾಜಕೀಯ ಗೊಂದಲ ಆಡಳಿತ ಯಂತ್ರಕ್ಕೆ ಪರಿಣಾಮ ಬೀರೋದಿಲ್ಲ : ಶೆಟ್ಟರ್
ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಸಿದ್ದಲಿಂಗ ಸ್ವಾಮೀಜಿ ಆಶೀರ್ವಾದ ಪಡೆದರು. ಬಳಿಕ ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದು ಪತ್ರಕರ್ತರ ಜೊತೆ ಮಾತನಾಡಿ, ಪಕ್ಷದಲ್ಲಿ ಕೇವಲ ಆಂತರಿಕ ಸಮಸ್ಯೆಗಳಿವೆ. ಇದನ್ನು ಮುಖ್ಯಮಂತ್ರಿಗಳು ಚರ್ಚಿಸಿ ಬಗೆಹರಿಸುತ್ತಾರೆ. ಈ ಸಮಸ್ಯೆಗಳು ಬಹಿರಂಗವಾಗಿ ಚರ್ಚಿಸುವಂತವು ಅಲ್ಲ ಎಂದರು.
ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಜಗದೀಶ್ ಶೆಟ್ಟರ್
ಮುಖಂಡರಲ್ಲಿ ಯಾವುದೇ ಸಮಸ್ಯೆಗಳು ಇದ್ದರೆ ಮುಖ್ಯಮಂತ್ರಿಗಳೊಂದಿಗೆ ಕುಳಿತು ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸೋಣ.ನಾಯಕತ್ವ ಬದಲಾವಣೆ ಕುರಿತು ಯಾರೂ ಕೂಡ ಪ್ರಸ್ತಾಪಿಸಿಲ್ಲ.
Last Updated : May 31, 2020, 10:38 AM IST