ಕರ್ನಾಟಕ

karnataka

ETV Bharat / state

ಉರುಳಿಬಿದ್ದ ಲಕ್ಸ್​ ಸೋಪ್​ ಲಾರಿ: ಸಾಬೂನು ಕದ್ದೊಯ್ಯಲು ಮುಗಿಬಿದ್ದ ಜನ

ಖಾಸಗಿ ಬಸ್ಸೊಂದು ಮುಂದೆ ಸಾಗುತ್ತಿದ್ದ ಲಕ್ಸ್​ ಸೋಪುಗಳನ್ನು ತುಂಬಿದ್ದ ಲಾರಿಗೆ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದರು. ಆದ್ರೆ ಇದೆಲ್ಲವನ್ನ ಲೆಕ್ಕಿಸದ ಜನ ಮಾತ್ರ ಲಾರಿಯಲ್ಲಿದ್ದ ಲಕ್ಸ್​ ಸೋಪುಗಳನ್ನು ಕದ್ದೊಯ್ಯುವುದರಲ್ಲಿ ಬ್ಯುಸಿಯಾಗಿದ್ದರು.

By

Published : Nov 3, 2019, 4:20 PM IST

Updated : Nov 3, 2019, 4:56 PM IST

ಸೋಪ್​ ಕದ್ದೊಯ್ಯಲು ಮುಗಿಬಿದ್ದ ಜನ

ತುಮಕೂರು: ನಗರದ ಹೊರವಲಯದಲ್ಲಿರುವ ಊರುಕೆರೆ ಪೋಸ್ಟ್ ಬಳಿ ಬೆಳಗ್ಗೆ ಸಂಭವಿಸಿದ್ದ ಅಪಘಾತದಲ್ಲಿ ಲಾರಿಯಲ್ಲಿದ್ದ ಲಕ್ಸ್ ಸೋಪು ರಸ್ತೆ ತುಂಬಾ ಚೆಲ್ಲಾಡಿದ್ದವು. ಈ ವೇಳೆ ಸೋಪುಗಳನ್ನು ಕದ್ದೊಯ್ಯಲು ಸಾರ್ವಜನಿಕರು ನಾ ಮುಂದು ತಾ ಮುಂದು ಎನ್ನುತ್ತ ಮುಗಿಬಿದ್ದಿದ್ದರು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್​ ಕ್ಲಿಕ್​ ಮಾಡಿ

ಲಾರಿಗೆ ಬಸ್ ಡಿಕ್ಕಿ.. ಸ್ಥಳದಲ್ಲೇ ಮೂವರ ದುರ್ಮರಣ,16 ಮಂದಿಗೆ ಗಂಭೀರ ಗಾಯ..

ಖಾಸಗಿ ಬಸ್​ವೊಂದು ಮುಂದೆ ಸಾಗುತ್ತಿದ್ದ ಲಕ್ಸ್​ ಸೋಪುಗಳನ್ನು ತುಂಬಿದ್ದ ಲಾರಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಲಾರಿ ಪಲ್ಟಿಯಾಗಿತ್ತು. ಈ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದರು.

ರಾಮಪ್ಪ ಎರೆಬಳ್ಳಿ(45), ಫಜಲ್ ವುಲ್ಲಾ (35) ಸೇರಿ ಮೂವರು ಮೃತಪಟ್ಟಿದ್ದರೆ, ಗೊಟ್ಟೆನಾಯ್ಡು(57) , ಕೀರ್ತಿ , ಅಶ್ವಿನ್ ಕುಮಾರ್, ರಾಜೇಶ ಎಂಬುವರಿಗೆ ಗಾಯಗಳಾಗಿವೆ.

Last Updated : Nov 3, 2019, 4:56 PM IST

ABOUT THE AUTHOR

...view details