ತುಮಕೂರು: ಜಿಲ್ಲೆಯ ಶಿರಾ ತಾಲೂಕಿನಲ್ಲಿ ಮಿಡತೆಗಳ ಹಾವಳಿಯಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಈ ಮಿಡತೆಗಳು ಸಧ್ಯ ಎಕ್ಕೆ ಗಿಡಗಳ ಮೇಲೆ ದಾಳಿ ಮಾಡಿದ್ದು, ಜನರು ಭಯ ಭೀತರಾಗಿದ್ದಾರೆ.
ಶಿರಾ: ಎಕ್ಕೆ ಗಿಡಗಳ ಮೇಲೆ ಮಿಡತೆಗಳ ಹಿಂಡು, ಬೆಂಕಿ ತಾಗಿಸಿದರೂ ಬೆದರುತ್ತಿಲ್ಲ - Tumkur GrasshopperAnxiety
ಶಿರಾ ತಾಲೂಕಿನ ಗಂಗನಹಳ್ಳಿಯಲ್ಲಿ ಹಸಿರು ಮಿಡತೆಗಳು ಕಾಣಿಸಿಕೊಂಡಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.
![ಶಿರಾ: ಎಕ್ಕೆ ಗಿಡಗಳ ಮೇಲೆ ಮಿಡತೆಗಳ ಹಿಂಡು, ಬೆಂಕಿ ತಾಗಿಸಿದರೂ ಬೆದರುತ್ತಿಲ್ಲ locust attacks](https://etvbharatimages.akamaized.net/etvbharat/prod-images/768-512-7426031-24-7426031-1590983907189.jpg)
ಮಿಡತೆಗಳ ಹಾವಳಿ
ಶಿರಾ ತಾಲೂಕಿನ ಗಂಗನಹಳ್ಳಿಯಲ್ಲಿ ಹಸಿರು ಮಿಡತೆಗಳು ಕಾಣಿಸಿಕೊಂಡಿದ್ದು, ಇವು ಗಿಡಗಳ ಎಲೆಗಳನ್ನು ತಿನ್ನುತ್ತಿದ್ದು, ಮುಂದಿನ ದಿನಗಳಲ್ಲಿ ಬೆಳೆಗಳ ಮೇಲೆ ದಾಳಿ ಮಾಡಬಹುದು ಎಂದು ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಗುಂಪು ಗುಂಪಾಗಿ ಗಿಡಗಳ ಮೇಲೆ ಕಾಣಿಸಿಕೊಂಡಿರುವ ಈ ಮಿಡತೆಗಳು ಬೆಂಕಿ ತಾಗಿಸಿದರು ಹಾರಿ ಹೋಗುತ್ತಿಲ್ಲ.
ಗಂಗನಹಳ್ಳಿಯಲ್ಲಿ ಮಿಡತೆಗಳ ಹಾವಳಿ.
ಸಧ್ಯ ಮುಂಗಾರು ಶುರುವಾಗಿದ್ದು ಬಿತ್ತನೆ ಕಾರ್ಯ ಶುರುವಾಗಿದೆ. ಶಿರಾ ತಾಲೂಕಿನಲ್ಲಿ ಶೇಂಗಾ, ರಾಗಿ, ಅಲಸಂದೆ, ತೊಗರಿ, ಜೋಳದ ಬೆಳೆಗಳನ್ನು ಅಧಿಕವಾಗಿ ಬೆಳೆಯುವುದರಿಂದ ಈ ಮಿಡತೆಗಳು ನಮ್ಮ ಬೆಳೆಗಳನ್ನು ಹಾನಿ ಮಾಡಬಹುದೆಂಬ ಭಯದಲ್ಲೇ ಜಮೀನಿನ ಕೆಲಸ ಕಾರ್ಯ ಮಾಡುತ್ತಿದ್ದಾರೆ.