ಕರ್ನಾಟಕ

karnataka

ETV Bharat / state

ಭೀಕರ ಅಪಘಾತ: ಬಸ್​​ಗೆ ಕಾರು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವು - Tumakuru

ಕಾರು ಮತ್ತು ಬಸ್​ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾನೆ. ಈ ಕುರಿತು ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ

By

Published : Jun 16, 2019, 11:08 PM IST

ತುಮಕೂರು: ಕೆಎಸ್ಆರ್​ಟಿಸಿ ಬಸ್​ಗೆ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲಿ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿರುವ ಘಟನೆ ಗುಬ್ಬಿ ತಾಲೂಕಿನ ದೊಡ್ಡಗುಣಿ ಗ್ರಾಮದ ಬಳಿ ನಡೆದಿದೆ.

ಬಸ್​ ಮತ್ತು ಕಾರಿನ ನಡುವೆ ಜರುಗಿದ ಡಿಕ್ಕಿಗೆ ಜಖಂಗೊಂಡಿರುವುದು

ಮೃತರನ್ನು ಶಿವಕುಮಾರ್ (27) ಮತ್ತು ಲೋಹಿತ್​​ಕುಮಾರ್ (26) ಎಂದು ಗುರುತಿಸಲಾಗಿದೆ. ಇಬ್ಬರೂ ಕಾರಿನಲ್ಲಿ ತುಮಕೂರಿಗೆ ಹೋಗುತ್ತಿದ್ದ ವೇಳೆ ಗುಬ್ಬಿ ತಾಲೂಕಿನ ದೊಡ್ಡಗುಣಿ ಕೆರೆ ಏರಿ ಮೇಲೆ ತುಮಕೂರು ಕಡೆಯಿಂದ ತುರುವೇಕೆರೆಗೆ ಹೋಗುತ್ತಿದ್ದ ಬಸ್​ಗೆ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಲೋಹಿತ್​ಕುಮಾರ್ ಅವರ ಪತ್ನಿ ಒಂದು ವಾರದ ಹಿಂದೆ ಮಗುವಿಗೆ ಜನ್ಮ ನೀಡಿದ್ದರು. ಹಾಗಾಗಿ ಲೋಹಿತ್​ಕುಮಾರ್​ ಅವರು ತಮ್ಮ ಮಗುವನ್ನು ನೋಡಲು ತುಮಕೂರಿಗೆ ಹೋಗುತ್ತಿದ್ದರು. ಶಿವಕುಮಾರ್ ಚಿಕ್ಕನಾಯಕನಹಳ್ಳಿ ಆಸ್ಪತ್ರೆಯಲ್ಲಿ 108 ಆಂಬ್ಯುಲೆನ್ಸ್​​ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗ್ತಿದೆ. ವಾಹನಗಳೆರಡು ಸಂಪೂರ್ಣವಾಗಿ ಜಖಂಗೊಂಡಿವೆ.

For All Latest Updates

TAGGED:

Tumakuru

ABOUT THE AUTHOR

...view details