ಕರ್ನಾಟಕ

karnataka

BSY ಕೆಳಗಿಳಿಸಿದರೆ ಬಿಜೆಪಿ ಸರ್ವನಾಶ: ಶ್ರೀಕಾರದ ವೀರಬಸವ ಸ್ವಾಮೀಜಿ Warning

By

Published : Jul 21, 2021, 7:03 AM IST

ಯಡಿಯೂರಪ್ಪ ಅವರನ್ನು ಕೆಳಗಿಳಿಸಿದರೆ ಬಿಜೆಪಿ ಪಕ್ಷ ಸರ್ವನಾಶ ಆಗುತ್ತದೆ. ಯಾವಾಗ ಯಡಿಯೂರಪ್ಪ ಅಧಿಕಾರಕ್ಕೆ ಬಂದರೋ ಅಂದಿನಿಂದ ಕುಗ್ಗದೆ ಕೆಲಸ ಮಾಡಿದ್ದಾರೆ ಎಂದು ಬೆಳ್ಳಾವಿ ಮಠದ ಕಾರದ ಮಠದ ಶ್ರೀಕಾರದವೀರಬಸವ ಸ್ವಾಮೀಜಿ ಹೇಳಿದ್ದಾರೆ.

tumkur
ಬೆಳ್ಳಾವಿ ಮಠದ ಕಾರದ ಮಠದ ಶ್ರೀಕಾರದವೀರಬಸವ ಸ್ವಾಮೀಜಿ

ತುಮಕೂರು: ಯಡಿಯೂರಪ್ಪ ಅವರನ್ನು ಸರ್ಕಾರದಿಂದ ಇಳಿಸುವುದು ಸೂಕ್ತವಲ್ಲ. ದಕ್ಷಿಣ ಭಾರತದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಯಶಸ್ವಿ ನಾಯಕ. ಯಾವಾಗ ಯಡಿಯೂರಪ್ಪ ಅಧಿಕಾರಕ್ಕೆ ಬಂದರೋ ಅಂದಿನಿಂದ ಕುಗ್ಗದೇ ಕೆಲಸ ಮಾಡಿದ್ದಾರೆ ಎಂದು ತುಮಕೂರು ಗ್ರಾಮಾಂತರ ತಾಲೂಕಿನ ಬೆಳ್ಳಾವಿ ಮಠದ ಕಾರದ ಮಠದ ಶ್ರೀಕಾರದವೀರಬಸವ ಸ್ವಾಮೀಜಿ ಹೇಳಿದ್ದಾರೆ.

ಬೆಳ್ಳಾವಿ ಮಠದ ಕಾರದ ಮಠದ ಶ್ರೀಕಾರದವೀರಬಸವ ಸ್ವಾಮೀಜಿ

ಕಳೆದ ಬಾರಿ 15ಕ್ಕೂ ಹೆಚ್ಚು ಸ್ವಾಮೀಜಿಗಳ ಜೊತೆ ಸಭೆ ನಡೆಸಿ ಬಿಎಸ್​ವೈಗೆ ಬೆಂಬಲ ನೀಡಿದ್ದ ಕಾರದ ಮಠದ ಸ್ವಾಮೀಜಿ, ಯಡಿಯೂರಪ್ಪ ಜೊತೆ ನಾವೆಲ್ಲ ಇದ್ದೇವೆ. ಅವರನ್ನ ರಕ್ಷಣೆ ಮಾಡುತ್ತೇವೆ. ಯಡಿಯೂರಪ್ಪ ಕೆಳಗಿಳಿಸಿದರೆ ಬಿಜೆಪಿ ಪಕ್ಷ ಸರ್ವನಾಶ ಆಗುತ್ತದೆ ಎಂದರು.

ಇದನ್ನು ಓದಿ: ಪುರೋಹಿತರ ಗಲಾಟೆ ವಿಡಿಯೋ ವೈರಲ್​: ಠಾಣೆ ಮೆಟ್ಟಿಲೇರಿದ ಅರ್ಚಕರ ಜಗಳ

ಇದೇ ರೀತಿ ಮುಂದುವರಿದರೆ ನಾವು ಹೈಕಮಾಂಡ್​ಗೆ ವಿಷಯ ಮುಟ್ಟಿಸೋದು ಗೊತ್ತು ಎಂದು ಗುಡುಗಿದ್ದಾರೆ.

ABOUT THE AUTHOR

...view details