ಕರ್ನಾಟಕ

karnataka

By

Published : Jan 21, 2020, 9:33 PM IST

ETV Bharat / state

ಕಲ್ಪತರು ನಾಡಲ್ಲಿ ಶಿವಕುಮಾರ ಸ್ವಾಮೀಜಿ ಪುಣ್ಯ ಸ್ಮರಣೆ!

ಜಿಲ್ಲಾ ವೀರಶೈವ ಲಿಂಗಾಯತ ಸೇವಾ ಸಮಿತಿಯಿಂದ ಡಾ. ಶ್ರೀ ಶಿವಕುಮಾರ ಸ್ವಾಮೀಜಿರವರ ಪುಣ್ಯ ಸ್ಮರಣೆ ಮತ್ತು ಶಿವಾನುಭವಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.

Shivakumar Swamiji Punya smarane
ಕಲ್ಪತರು ನಾಡಿನಲ್ಲಿ ನಡೆದ ಶಿವಕುಮಾರ ಸ್ವಾಮೀಜಿರವರ ಪುಣ್ಯ ಸ್ಮರಣೆ ಮತ್ತು ಶಿವಾನುಭವಗೋಷ್ಟಿ

ತುಮಕೂರು:ಶ್ರೀ ಶಿವಕುಮಾರ ಸ್ವಾಮೀಜಿ ಅವರು ನಮ್ಮಲ್ಲಿನ ಚೇತನದ ರೀತಿಯಲ್ಲಿ ಸದಾ ನಮ್ಮೊಂದಿಗೆ ಇದ್ದಾರೆ. ಶ್ರೀಗಳನ್ನು ನೆನೆಯುವುದರ ಜೊತೆಗೆ ಅವರು ಹಾಕಿಕೊಟ್ಟು ಹೋಗಿರುವಂತಹ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕು ಎಂದು ಬೆಟ್ಟದಹಳ್ಳಿ ಮಠದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್​ ಸ್ವಾಮೀಜಿಯವರು ತಿಳಿಸಿದರು.

ಜಿಲ್ಲಾ ವೀರಶೈವ ಲಿಂಗಾಯತ ಸೇವಾ ಸಮಿತಿಯಿಂದ ನಗರದ ಶ್ರೀ ಸಿದ್ದೇಶ್ವರ ಕನ್ವೆನ್ಷನ್ ಹಾಲ್​ನಲ್ಲಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿರವರ ಪುಣ್ಯ ಸ್ಮರಣೆ ಮತ್ತು ಶಿವಾನುಭವಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.

ಕಲ್ಪತರು ನಾಡಿನಲ್ಲಿ ನಡೆದ ಶಿವಕುಮಾರ ಸ್ವಾಮೀಜಿರವರ ಪುಣ್ಯ ಸ್ಮರಣೆ ಮತ್ತು ಶಿವಾನುಭವಗೋಷ್ಠಿ

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಟ್ಟದಹಳ್ಳಿ ಮಠದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಸ್ವಾಮೀಜಿ, ಸೂರ್ಯನು ಹೇಗೆ ಎಲ್ಲರ ಮನೆಯನ್ನು ಬೆಳಗುತ್ತಾನೋ, ಅದೇ ರೀತಿ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಎಲ್ಲರ ಮನೆಯನ್ನು ಬೆಳಗುವ ಮೂಲಕ ಎಲ್ಲರ ಹೃದಯದಲ್ಲಿಯೂ ನೆಲೆಸಿದ್ದಾರೆ. ಅವರ ಸೇವೆ ಹೇಗೆಂದರೆ ಗಂಧವನ್ನು ಎಷ್ಟು ತೈದರು ಅದರಿಂದ ಬರುವ ಗಂಧದ ಹಾಗೆ, ಅವರ ಸಂಪೂರ್ಣ ಜೀವನವನ್ನು ಇಡೀ ಸಮಾಜಕ್ಕಾಗಿ, ಸಮಾಜದ ಬೆಳವಣಿಗೆಗಾಗಿ ಅರ್ಪಣೆ ಮಾಡಿದವರು.

ಇಂದಿಗೂ ಸಹ ಅವರು ನಮ್ಮಲ್ಲಿನ ಚೇತನದ ರೀತಿಯಲ್ಲಿ ಸದಾ ನಮ್ಮೊಂದಿಗೆ ಇದ್ದಾರೆ. ಶ್ರೀಗಳನ್ನು ನೆನೆಯುವುದರ ಜೊತೆಗೆ ಅವರು ಹಾಕಿಕೊಟ್ಟು ಹೋಗಿರುವಂತಹ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀ ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ವಹಿಸಿದ್ದರು. ವಿವಿಧ ಮಠದ ಮಠಾಧೀಶರು ಪಾಲ್ಗೊಂಡಿದ್ದರು, ಕಾರ್ಯಕ್ರಮಕ್ಕೂ ಮುನ್ನ ನಗರದ ವಿವಿಧ ಬೀದಿಗಳಲ್ಲಿ ಶ್ರೀಗಳ ಪ್ರತಿಮೆಯ ಮೆರವಣಿಗೆ ನಡೆಸಲಾಯಿತು. ಈ ಮೆರವಣಿಗೆ ಮಠಾಧೀಶರು ಸಾಥ್ ನೀಡಿದರು.

For All Latest Updates

ABOUT THE AUTHOR

...view details