ಕರ್ನಾಟಕ

karnataka

ETV Bharat / state

ಶಿರಾ ನಿಲ್ದಾಣಕ್ಕೆ ಪ್ರತಿ ಬಸ್​​ ಸಂಚರಿಸಬೇಕು ಎಂದು ಆಗ್ರಹಿಸಿ ರಸ್ತೆ ತಡೆ: ಪ್ರತಿಭಟನೆ

ಶಿರಾ ಬಸ್​ ನಿಲ್ದಾಣಕ್ಕೆ ಬರಲು ಬಸ್​ ಚಾಲಕರು ಹಿಂದೇಟು ಹಾಕಿದ್ದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಬಸ್ ಸಂಚಾರಕ್ಕೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸಿದರು. ಇದರಿಂದ ಬೈಪಾಸ್​ ರಸ್ತೆಯಲ್ಲಿ ಕೆಲಹೊತ್ತು ಸಂಚಾರ ದಟ್ಟಣೆ ಉಂಟಾಯಿತು.

By

Published : Jun 10, 2019, 12:06 PM IST

ರಸ್ತೆ ತಡೆ ನಡೆಸಿ ಪ್ರತಿಭಟನೆ

ತುಮಕೂರು:ರಾತ್ರಿ ವೇಳೆ, ತುಮಕೂರಿನ ಶಿರಾ ತಾಲೂಕಿನ ಬಸ್​ ನಿಲ್ದಾಣಕ್ಕೆ ಬಸ್​ ಬಿಡುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಬೈಪಾಸ್​ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಶಿರಾ ಬಸ್​ ನಿಲ್ದಾಣಕ್ಕೆ ಬಸ್​ಗಳು ಸಂಚರಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ

ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕೆಲವು ಸಂಘಟನೆಗಳ ಮುಖಂಡರು ಬೈಪಾಸ್​ನಲ್ಲಿ ಸಾಗುತ್ತಿದ್ದ ಬಸ್​ಗಳನ್ನು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದರು. ಬೆಂಗಳೂರಿನಿಂದ ಹೊರಟ ಬಸ್​ಗಳಲ್ಲಿ ಪ್ರಯಾಣಿಸಿದ ಸಂಘಟನೆಗಳ ಕಾರ್ಯಕರ್ತರು ಶಿರಾ ನಗರಕ್ಕೆ ಹೋಗಲು ನಿರಾಕರಿಸಿದ ಚಾಲಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬಸ್​ ಸಂಚಾರಕ್ಕೆ ಅಡ್ಡಿಪಡಿಸಿದರು.

ಈ ಮೊದಲು ರಾತ್ರಿ ವೇಳೆ, ಬಸ್​ ನಿಲ್ದಾಣಕ್ಕೆ ಬರುತ್ತಿದ್ದ ಬಸ್​​ಗಳು ಏಕಾಏಕಿ ಸಂಚಾರ ನಿಲ್ಲಿಸಿದ್ದು, ಬಸ್​ ನಿಲ್ದಾಣಕ್ಕೆ ಬಾರದೇ ಬೈಪಾಸ್​ನಲ್ಲಿ ಸಾಗುತ್ತಿವೆ. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಷಯ ತಿಳಿದು ಪ್ರತಿಭಟನಾ ಸ್ಥಳಕ್ಕೆ ಬಂದ ಶಿರಾ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.

ABOUT THE AUTHOR

...view details