ಕರ್ನಾಟಕ

karnataka

ETV Bharat / state

ಮಹಿಳೆ ಕೊಂದು ಶೌಚಾಲಯದ ಗುಂಡಿಯಲ್ಲಿ ಹೂತು ಹಾಕಿದ್ದ ಖದೀಮನಿಗೆ ಜೀವಾವಧಿ ಶಿಕ್ಷೆ - ಮಹಿಳೆ ಕೊಂದು ಶೌಚಾಲಯದ ಗುಂಡಿಯಲ್ಲಿ ಹೂತು ಹಾಕಿದ್ದ ಖದೀಮ

ಮಹಿಳೆ ಕೊಲೆ ಮಾಡಿ ಶೌಚಾಲಯದ ಗುಂಡಿಯಲ್ಲಿ ಶವ ಹೂತು ಹಾಕಿದ್ದ ಪ್ರಕರಣದಲ್ಲಿ ಅಪರಾಧಿಗೆ ತುಮಕೂರಿನ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

person-gets-life-imprisonment-in-woman-murder-case
ಮಹಿಳೆ ಕೊಂದು ಶೌಚಾಲಯದ ಗುಂಡಿಯಲ್ಲಿ ಹೂತು ಹಾಕಿದ್ದ ಖದೀಮನಿಗೆ ಜೀವಾವಧಿ ಶಿಕ್ಷೆ

By

Published : Nov 30, 2022, 3:29 PM IST

ತುಮಕೂರು:ಮಹಿಳೆಯೊಬ್ಬರನ್ನು ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿ ಮನೆಯ ಶೌಚಾಲಯದ ಗುಂಡಿಯಲ್ಲಿ ಶವ ಹೂತು ಹಾಕಿದ್ದ ಪ್ರಕರಣದಲ್ಲಿ ಅಪರಾಧಿಗೆ ಇಲ್ಲಿನ ಜಿಲ್ಲಾ 6ನೇ ಅಧಿಕ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿ ಎ.ಕೆ ಕಾವಲು ಗ್ರಾಮದ ಹನುಮಂತೇಗೌಡ ಎಂಬಾತ ತಾಲೂಕಿನ ಉಳ್ಳೇನಹಳ್ಳಿ ಗ್ರಾಮದ ಮಹಿಳೆ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಆದರೆ, ಮಹಿಳೆಯು ಬೇರೆ ಪುರುಷರೊಂದಿಗೆ ಒಡನಾಟ ಹೊಂದಿದ್ದಾಳೆ ಎಂದು ಕ್ಯಾತೆ ತೆಗೆದು ಹನುಮಂತೇಗೌಡ ಆಗಾಗ ಜಗಳ ಮಾಡುತ್ತಿದ್ದ.

2017ರ ನವೆಂಬರ್​ 9ರಂದು ಮಹಿಳೆಯು ಹನುಮಂತೇಗೌಡನ ಮನೆಗೆ ಬಂದಿದ್ದ ವೇಳೆ ಪುನಃ ಜಗಳವಾಗಿತ್ತು. ಆಗ ಹನುಮಂತೇಗೌಡ ಆಕೆಯ ತಲೆಗೆ ಬಿದಿರು ದೊಣ್ಣೆಯಿಂದ ಹೊಡೆದು ಸಾಯಿಸಿದ್ದ. ಬಳಿಕ ಮೃತದೇಹವನ್ನು ತನ್ನ ಮನೆಯ ಶೌಚಾಲಯದ ಗುಂಡಿಯಲ್ಲಿ ಹೂತು ಹಾಕಿದ್ದ.

ಪೊಲೀಸ್ ದೂರು:ಇತ್ತ ಮಹಿಳೆ ಕಾಣೆಯಾದ ಬಗ್ಗೆ ಆಕೆಯ ಸಹೋದರಿಯು ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕೊಲೆ ಬಗ್ಗೆ ಹನುಮಂತೇಗೌಡ ಒಪ್ಪಿಕೊಂಡಿದ್ದ. ಬಳಿಕ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಇದರ ವಿಚಾರಣೆ ನಡೆಸಿದ ತುಮಕೂರು ಜಿಲ್ಲಾ 6ನೇ ಅಧಿಕ ಮತ್ತು ನತ್ರ ನ್ಯಾಯಾಲಯದ ನ್ಯಾಯಾಧೀಶರಾದ ಚಂದ್ರಶೇಖರ್ ಅವರು ಆರೋಪ ಸಾಬೀತಾದ ಕಾರಣ ಅಪರಾಧಿಗೆ ಜೀವಾವಧಿ ಶಿಕ್ಷೆ ಒಂದು 1.10 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಆರ್.ಟಿ ಅರುಣ ವಾದ ಮಂಡಿಸಿದ್ದರು.

ಇದನ್ನೂ ಓದಿ:ಪ್ರೇಮಿಗಳ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ.. ಅನುಮಾನಪಟ್ಟು ಪ್ರೀತಿಸಿದವಳನ್ನೇ ಕೊಂದ ಲವರ್​

ABOUT THE AUTHOR

...view details