ತುಮಕೂರು:ಕೆಟ್ಟು ನಿಂತ ಲಾರಿಯನ್ನು ರಸ್ತೆ ಬದಿ ರಿಪೇರಿ ಮಾಡುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಕಂಟೈನರ್ ಡಿಕ್ಕಿ ಹೊಡೆದ ಪರಿಣಾಮ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಶಿರಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48ರ ಬಳಿ ನಡೆದಿದೆ.
ಲಾರಿ ರಿಪೇರಿ ಮಾಡ್ತಿದ್ದ ಕ್ಲೀನರ್ಗೆ ಕಂಟೈನರ್ ಡಿಕ್ಕಿ... ಕ್ಲೀನರ್ ಸ್ಥಳದಲ್ಲೇ ಸಾವು - ಜಿಲ್ಲೆಯ ಶಿರಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48ರ ಬಳಿ ಕ್ಲೀನರ್ಗೆ ಕಂಟೈನರ್ ಡಿಕ್ಕಿ
ಕೆಟ್ಟು ನಿಂತ ಲಾರಿಯನ್ನು ರಸ್ತೆ ಬದಿ ರಿಪೇರಿ ಮಾಡುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಕಂಟೈನರ್ ಡಿಕ್ಕಿ ಹೊಡೆದ ಪರಿಣಾಮ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶಿರಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48ರ ಬಳಿ ನಡೆದಿದೆ.

ಲಾರಿ ರಿಪೇರಿ ಮಾಡ್ತಿದ್ದ ಕ್ಲೀನರ್ಗೆ ಕಂಟೈನರ್ ಡಿಕ್ಕಿ...ಸ್ಥಳದಲ್ಲೇ ಸಾವು...
ಮೃತ ವ್ಯಕ್ತಿಯನ್ನು ಮೊಹಮದ್ ಸೈಫ್ ಎಂದು ಗುರುತಿಸಲಾಗಿದೆ. ಲಾರಿಯು ಬಳ್ಳಾರಿ ಕಡೆಗೆ ಹೋಗುತ್ತಿದ್ದ ವೇಳೆ ಕೆಟ್ಟು ನಿಂತ ಪರಿಣಾಮ ರಸ್ತೆ ಬದಿಯಲ್ಲಿ ಕ್ಲೀನರ್ ರಿಪೇರಿ ಮಾಡುತ್ತಿದ್ದ.
ಕಂಟೈನರ್ ಲಾರಿ ಚಾಲಕ ರವೀಂದ್ರ ಕುಮಾರನನ್ನು ಪೊಲೀಸರು ಬಂಧಿಸಿದ್ದು, ಈ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.