ಕರ್ನಾಟಕ

karnataka

ETV Bharat / state

ದೇವೇಗೌಡರ ಸೋಲಿಗೆ ಮೋದಿ ಅಲೆ ಕಾರಣ.... ಸಚಿವ ಎಸ್. ಆರ್. ಶ್ರೀನಿವಾಸ್ - undefined

ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಅಲೆ ಇತ್ತು. ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಆಶಯದಿಂದ ಮತದಾರರು ಬಿಜೆಪಿಗೆ ಮತ ಹಾಕಿದ್ದಾರೆ. ಇದು ತುಮಕೂರಿನಲ್ಲಿ ಕೂಡಾ ಪ್ರತಿಧ್ವನಿಸಿದೆ. ಒಂದು ರೀತಿಯಲ್ಲಿ ದೇವೇಗೌಡರ ಸೋಲಿಗೆ ಮೋದಿ ಅಲೆಯೇ ಕಾರಣ ಎಂದು ಸಚಿವ ಎಸ್ ಆರ್ ಶ್ರೀನಿವಾಸ್ ಹೇಳಿದ್ದಾರೆ.

ಸಚಿವ ಎಸ್ ಆರ್ ಶ್ರೀನಿವಾಸ್

By

Published : May 24, 2019, 12:52 PM IST

ತುಮಕೂರು:ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಸೋಲಿಗೆ ಮೋದಿ ಅಲೆ ಕಾರಣ ಎಂದು ಸಣ್ಣ ಕೈಗಾರಿಕಾ ಸಚಿವ‌ ಎಸ್ ಆರ್ ಶ್ರೀನಿವಾಸ್ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ಪ್ರಭಾವವೇ ಈ ರೀತಿಯಾದ ಫಲಿತಾಂಶಕ್ಕೆ ಕಾರಣ. ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ಅಲೆ ಇತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್​ಗೆ ಉತ್ತಮ ಬೆಂಬಲವಿತ್ತು. ಆದರೆ ಈ ಬಾರಿ ಅಲ್ಲಿಯೂ ಬಿಜೆಪಿಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಆಶಯದಿಂದ ಮತದಾರರು ಬಿಜೆಪಿಗೆ ಮತ ಹಾಕಿದ್ದಾರೆ. ಇದು ತುಮಕೂರಿನಲ್ಲಿ ಕೂಡಾ ಪ್ರತಿಧ್ವನಿಸಿದೆ ಎಂದು ಹೇಳಿದರು.

ಸಚಿವ ಎಸ್ ಆರ್ ಶ್ರೀನಿವಾಸ್

ಕೆ ಎನ್ ರಾಜಣ್ಣಗೆ ಕುಟುಕಿದ ಶ್ರೀನಿವಾಸ್ ...

ಇನ್ನು ಮಧುಗಿರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜೆಡಿಎಸ್​ಗೆ ಸ್ವಲ್ಪ ಗೊಂದಲಮಯ ವಾತಾವರಣ ಇರುವುದು ಖಚಿತ. ಅಲ್ಲದೆ ಅಲ್ಲಿನ ಸ್ಥಳೀಯ ನಾಯಕರಿಗೆ ಇದರ ಅನುಭವ ಮುಂದಿನ ದಿನಗಳಲ್ಲಿ ಆಗಲಿದೆ. ಆ ನಾಯಕರಿಗೆ ದೇವೇಗೌಡರು ನೆಲೆ ಕಲ್ಪಿಸಿಕೊಟ್ಟಿದ್ದರು ಎಂದು ಪರೋಕ್ಷವಾಗಿ ಮಾಜಿ ಶಾಸಕ ಕಾಂಗ್ರೆಸ್ ಮುಖಂಡ ಕೆ ಎನ್ ರಾಜಣ್ಣ ಅವರನ್ನು ಕುಟುಕಿದರು.

For All Latest Updates

TAGGED:

ABOUT THE AUTHOR

...view details