ತುಮಕೂರು: ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ತುರುವೇಕೆರೆ ಶಾಸಕ ಮಸಾಲೆ ಜಯರಾಮ್ ಮೆರವಣಿಗೆಯಲ್ಲಿ ನೃತ್ಯ ಮಾಡುವ ಮೂಲಕ ಗಮನ ಸೆಳೆದರು. ತುರುವೇಕೆರೆ ಪಟ್ಟಣದ ಹೃದಯಭಾಗದಲ್ಲಿ ಅಂಬೇಡ್ಕರ್ ವೃತ್ತ ಉದ್ಘಾಟನೆ ಮಾಡಿದ ಶಾಸಕರು, ಅಂಬೇಡ್ಕರ್ ಅಭಿಮಾನಿಗಳೊಂದಿಗೆ ಹೆಜ್ಜೆ ಹಾಕಿದರು. ಸುಮಾರು 20 ನಿಮಿಷಗಳ ಕಾಲ ನೀಲಿ ಶಾಲು ಹಾಕಿಕೊಂಡು ಜಯಂತಿಗೆ ಮೆರಗು ತಂದರು.
ತುಮಕೂರಿನಲ್ಲಿ ಕುಣಿದು ಕುಪ್ಪಳಿಸಿದ ಶಾಸಕ ಮಸಾಲೆ ಜಯರಾಮ್