ತುಮಕೂರು: ಎಲ್ಲೋ ಒಂದು ಕಡೆ ಪಕ್ಷ ನನಗೆ ದ್ರೋಹ ಮಾಡ್ತಾ ಇದೆ ಅನ್ನುವ ಮಟ್ಟಕ್ಕೆ ಬಂದಿದೆ. ರಾಜ್ಯಾಧ್ಯಕ್ಷರನ್ನು, ಮುಖ್ಯಮಂತ್ರಿಗಳನ್ನು ಕೇಳಿದ್ದೇವೆ. ಅವರು ಕಡೆಗಣಿಸಿದರೆ ಯಾವುದೇ ಕಾರಣಕ್ಕೂ ಪಕ್ಷದಲ್ಲಿ ಇರೋಲ್ಲ ಎಂದು ತುರುವೇಕೆರೆ ಬಿಜೆಪಿ ಶಾಸಕ ಮಸಾಲೆ ಜಯರಾಂ ಗುಡುಗಿದ್ದಾರೆ.
ಎಲ್ಲೋ ಒಂದು ಕಡೆ ಪಕ್ಷ ನನಗೆ ದ್ರೋಹ ಮಾಡ್ತಾ ಇದೆ: ಬಿಜೆಪಿ ಶಾಸಕ ಮಸಾಲೆ ಜಯರಾಂ
ತುರುವೇಕೆರೆ ಬಿಜೆಪಿ ಶಾಸಕ ಮಸಾಲೆ ಜಯರಾಂ ತುಮಕೂರಲ್ಲಿ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಶಾಸಕ ಮಸಾಲೆ ಜಯರಾಂ
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನೇನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಒಂದೊಳ್ಳೆ ನಿಗಮ ಕೊಡಿ ಎಂದು ಕೇಳಿದ್ದೇನೆ. ನಮ್ಮ ತಾಳ್ಮೆಗೂ ಒಂದು ಮಿತಿ ಇದೆ. ನವಂಬರ್ ಅಂತ್ಯದವರೆಗೂ ಕಾದು ನೋಡುತ್ತೇನೆ. ಕೊಟ್ರೆ ಕೊಡಲಿ, ಇಲ್ಲ ಅಂದ್ರೆ ನಾವು ಏನ್ ಮಾಡಬೇಕೋ ಮಾಡ್ತೀವಿ ಎಂದರು.
ಜನರು ಮತ ಹಾಕಿ ನನ್ನನ್ನು ಗೆಲ್ಲಿಸಿದ್ದಾರೆ. ಅವರಿಗೆ ತೃಪ್ತಿ ಆಗೋ ಹಾಗೆ ಕೆಲಸ ಮಾಡಿದ್ದೇನೆ. ಯಾವುದೆ ಸ್ಥಾನ ಇಲ್ಲದೇ ನಾನು ಕೆಲಸ ಮಾಡುವ ತಾಕತ್ ನನಗಿದೆ. ಜಿಲ್ಲಾಧ್ಯಕ್ಷ ಸ್ಥಾನ ಬೇಡ ಎಂದರು.