ಕರ್ನಾಟಕ

karnataka

ETV Bharat / state

ಶಾಸಕ ಶ್ರೀನಿವಾಸ್ ಬಿಟ್ಟರೆ ಜೆಡಿಎಸ್ ಪಕ್ಷಕ್ಕೂ ನಷ್ಟ : ಶಾಸಕ ಸಾ ರಾ ಮಹೇಶ್

ಗುಬ್ಬಿ ಜೆಡಿಎಸ್ ರೆಬಲ್​ ಶಾಸಕ ಶ್ರೀನಿವಾಸ್ ಅವರ ಮನೆಗೆ ಶಾಸಕ ಸಾ ರಾ ಮಹೇಶ್ ಭೇಟಿ ನೀಡಿದ್ದರು.

By

Published : Nov 9, 2022, 11:56 AM IST

Updated : Nov 9, 2022, 5:40 PM IST

Etv Bharat
ಶಾಸಕ ಸಾ ರಾ ಮಹೇಶ್ ಪತ್ರಕರ್ತರೊಂದಿಗೆ ಮಾತನಾಡಿದರು.

ತುಮಕೂರು:ಜೆಡಿಸ್​ ರೆಬಲ್ ಶಾಸಕ ಶ್ರೀನಿವಾಸ್ ಮತ್ತೆ ಪಕ್ಷದಲ್ಲಿ ಇರುವುದರಿಂದ ಪಕ್ಷ ಮತ್ತು ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ಹೆಚ್ಚುತ್ತದೆ ಎಂದು ಶಾಸಕ ಸಾ. ರಾ. ಮಹೇಶ್ ಹೇಳಿದರು.

ತುಮಕೂರಿನಲ್ಲಿ ಗುಬ್ಬಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಶ್ರೀನಿವಾಸ್​ ಮನೆಗೆ ಭೇಟಿ ನೀಡಿದ್ದ ಅವರು, ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದರು, ನಮಗೆ ವಿಶ್ವಾಸವಿದೆ ಶ್ರೀನಿವಾಸ್​ ಜೆಡಿಎಸ್​ ಬಿಡುವುದಿಲ್ಲ. ಅವರು ಪಕ್ಷ ಬಿಟ್ಟರೆ ಇಬ್ಬರಿಗೂ ನಷ್ಟ. ಇದಕ್ಕೆಲ್ಲಾ ಪಕ್ಷದ ರಾಷ್ಟ್ರೀಯ ನಾಯಕರು ಮತ್ತು ಕುಮಾರಣ್ಣ ತೀರ್ಮಾನ ಮಾಡ್ತಾರೆ ಎಂದು ಹೇಳಿದರು.

ವೈಯಕ್ತಿಕವಾಗಿ ಅವರ ಕುಟುಂಬದ ಜತೆ ಆತ್ಮೀಯ ಸಂಬಂಧ ಇದ್ದು, ನಾವಿಬ್ಬರೂ ಸ್ನೇಹಿತರು ಇರುವ ಕಾರಣ ಶ್ರೀನಿವಾಸ್​ ಮನೆಗೆ ಭೇಟಿ ಕೊಟ್ಟಿದ್ದೇನೆ. ಇನ್ನುಳಿದ ರಾಜಕೀಯದ ಬಗ್ಗೆ ಚರ್ಚಿಸಿಲ್ಲ ಎಂದು ತಿಳಿಸಿದರು.

ಶ್ರೀನಿವಾಸ್ ಮತ್ತು ನಾನು ಇಬ್ಬರೂ ಮೈಸೂರಿನಲ್ಲಿ ನಡೆದ ಕಾರ್ಯಾಕಾರಿ ಸಭೆಯಲ್ಲಿ ಕುಮಾರಣ್ಣ ಅವರನ್ನು ಭೇಟಿಯಾಗಿದ್ದು. ಆ ಬಳಿಕ ಕುಮಾರಣ್ಣನನ್ನು ಭೇಟಿ ಆಗಿಲ್ಲ ಎಂದರು.

ಇದನ್ನೂ ಓದಿ:ಅಂದು ಪಂಚರಾಜ್ಯ, ಇಂದು ಗುಜರಾಜ್ ಚುನಾವಣೆ, ಬೊಮ್ಮಾಯಿ ಸಂಪುಟ ವಿಸ್ತರಣೆಗೆ ಕೂಡಿ ಬರದ ಮುಹೂರ್ತ

Last Updated : Nov 9, 2022, 5:40 PM IST

ABOUT THE AUTHOR

...view details