ಕರ್ನಾಟಕ

karnataka

ETV Bharat / state

ಸಮೃದ್ಧಿ ಸೇವಾ ಟ್ರಸ್ಟ್​​​ನಿಂದ ಸಾಮೂಹಿಕ ಸೀಮಂತ ಕಾರ್ಯಕ್ರಮ - ಸಮೃದ್ಧಿ ಸೇವಾ ಟ್ರಸ್ಟ್ ವತಿಯಿಂದ ಸಾಮೂಹಿಕ ಸೀಮಂತ ಕಾರ್ಯಕ್ರಮ

ಹೆಗ್ಗೆರೆಯ ಸಮೃದ್ಧಿ ಸೇವಾ ಟ್ರಸ್ಟ್​​​ನಿಂದ ಬಡ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮದಲ್ಲಿ ವಿಧಿವಿಧಾನದಂತೆ ಮಡಿಲು ತುಂಬುವ ಪದ್ಧತಿಯನ್ನು ಕೂಡ ನೆರವೇರಿಸಲಾಯಿತು.

ಸಾಮೂಹಿಕ ಸೀಮಂತ ಕಾರ್ಯಕ್ರಮ
ಸಾಮೂಹಿಕ ಸೀಮಂತ ಕಾರ್ಯಕ್ರಮ

By

Published : Aug 31, 2021, 9:49 PM IST

ತುಮಕೂರು :ಕೊರೊನಾ ಸೋಂಕು ಹರಡುವಿಕೆ ಭೀತಿ ಹಿನ್ನೆಲೆಯಲ್ಲಿ ಈಗಾಗಲೇ ಬಹುತೇಕ ಸರ್ಕಾರಿ ಕಾರ್ಯಕ್ರಮಗಳು ಸ್ಥಗಿತಗೊಂಡಿವೆ. ಅದರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ನಡೆಯುತ್ತಿದ್ದ ಸಾಮೂಹಿಕ ಸೀಮಂತ ಕಾರ್ಯಕ್ರಮ ಕೂಡ ಆಯೋಜನೆಗೊಂಡಿಲ್ಲ.

ಸಾಮೂಹಿಕ ಸೀಮಂತ ಕಾರ್ಯಕ್ರಮ

ಇನ್ನು ಗ್ರಾಮೀಣ ಪ್ರದೇಶದ ಬಡ ಹೆಣ್ಣುಮಕ್ಕಳು ಗರ್ಭಿಣಿಯರಾದ ನಂತರ ಸೀಮಂತ ಕಾರ್ಯಕ್ರಮದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ತಾಲೂಕಿನ ಸಮೃದ್ಧಿ ಸೇವಾ ಟ್ರಸ್ಟ್ ವತಿಯಿಂದ ಸರಳವಾಗಿ ಸಾಮೂಹಿಕ ಸೀಮಂತ ಕಾರ್ಯಕ್ರಮ ಆಚರಿಸಲಾಯಿತು.

ಹೆಗ್ಗೆರೆಯ ಸಮೃದ್ಧಿ ಸೇವಾ ಟ್ರಸ್ಟ್​​​​ನಿಂದ ಬಡ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮದಲ್ಲಿ ವಿಧಿವಿಧಾನದಂತೆ ಮಡಿಲು ತುಂಬುವ ಪದ್ಧತಿ ಕೂಡ ನೆರವೇರಿಸಲಾಯಿತು. ಟ್ರಸ್ಟ್​​ನ ಅಧ್ಯಕ್ಷರಾದ ಶಾಂತಕುಮಾರಿ ಅವರು ಕಾರ್ಯಕ್ರಮ ಆಯೋಜಿಸಿದ್ದು, 22 ಮಂದಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಲಾಗಿತ್ತು.

ಇದನ್ನೂ ಓದಿ : ಮೈಸೂರು ದಸರಾಗೆ ಬಂಡೀಪುರದ ಲಕ್ಷ್ಮಿ, ಚೈತ್ರಾ ಜೊತೆ ಪಾರ್ಥಸಾರಥಿ ಆಯ್ಕೆ..!

ABOUT THE AUTHOR

...view details