ತುಮಕೂರು:ಜಿಲ್ಲೆಯ ತಿಪಟೂರು ತಾಲೂಕಿನ ಶಿವರಾಮನಹಳ್ಳಿಯಲ್ಲಿ ಹೆಣ್ಣು ಚಿರತೆಯೊಂದು ಅನುಮಾನಾಸ್ಪದವಾಗಿ ಮೃತಪಟ್ಟಿದೆ.
ತುಮಕೂರು: ಅನುಮಾನಾಸ್ಪದವಾಗಿ ಚಿರತೆ ಸಾವು - ತುಮಕೂರು ಜಿಲ್ಲೆ ಸುದ್ದಿ
ಹೆಣ್ಣು ಚಿರತೆಯೊಂದು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಶಿವರಾಮನಹಳ್ಳಿಯಲ್ಲಿ ನಡೆದಿದೆ.
![ತುಮಕೂರು: ಅನುಮಾನಾಸ್ಪದವಾಗಿ ಚಿರತೆ ಸಾವು leopard died](https://etvbharatimages.akamaized.net/etvbharat/prod-images/768-512-8898786-781-8898786-1600783908154.jpg)
ಚಿರತೆ ಸಾವು
ಸುಮಾರು 3 ವರ್ಷದ ಚಿರತೆ ಇದಾಗಿದ್ದು, ದೇಹದ ಮೈ ಮೇಲೆ ಗಾಯಗಳಾಗಿವೆ. ಚಿರತೆಗಳ ನಡುವೆ ಅಥವಾ ಕಾಡುಹಂದಿ ಮತ್ತು ಚಿರತೆ ಮಧ್ಯೆ ಕಾದಾಟವಾಡುವಾಗ ಸಾವನ್ನಪ್ಪಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.