ಕರ್ನಾಟಕ

karnataka

ETV Bharat / state

ತುಮಕೂರು: ಕೆಎಸ್​ಆರ್​ಟಿಸಿ ಬಸ್​ ಸಂಚಾರಕ್ಕೆ ಸಿದ್ಧತೆ - ಬಸ್​ ಸಂಚಾರ ಪುನರಾರಂಭ

ನಾಳೆ ಲಾಕ್‌ಡೌನ್ ಅಂತ್ಯಗೊಳ್ಳುವ ಹಿನ್ನೆಲೆಯಲ್ಲಿ ಬಸ್​ ಸಂಚಾರ ಆರಂಭಗೊಳ್ಳಲಿದ್ದು, ತುಮಕೂರು ಕೆಎಸ್​ಆರ್​ಟಿಸಿ ಡಿಪೋದಲ್ಲಿ ಸಿದ್ದತೆ ಮಾಡಿಕೊಳ್ಳಲಾಗ್ತಿದೆ.

Tumkur KSRTC Bus
ಬಸ್​ ಸಂಚಾರಕ್ಕೆ ಸಿದ್ದತೆ

By

Published : Jun 20, 2021, 2:08 PM IST

ತುಮಕೂರು:ನಾಳೆಯಿಂದ ತುಮಕೂರು- ಬೆಂಗಳೂರು ಹಾಗೂ ಜಿಲ್ಲೆಯ ತಾಲೂಕು ಕೇಂದ್ರಗಳಿಗೆ ಕೆಎಸ್​ಆರ್​ಟಿಸಿ ಬಸ್ ಸಂಚಾರ ಆರಂಭಿಸಲು ತುಮಕೂರು ಡಿಪೋದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬಸ್​ ಮತ್ತು ನಿಲ್ದಾಣಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದೆ. ಬಸ್ ಪ್ರಯಾಣಕ್ಕೆ ಕೋವಿಡ್ ನೆಗೆಟಿವ್ ವರದಿ ತೋರಿಸುವಂತೆ ಸೂಚನೆ ನೀಡಲಾಗಿದೆ.

ಈ ಕುರಿತು ಈಟಿವಿ ಭಾರತ್​ಗೆ ಮಾಹಿತಿ ನೀಡಿರುವ ತುಮಕೂರು ವಿಭಾಗಿಯ ಸಂಚಾರ ಅಧಿಕಾರಿ ಫಕ್ರುದ್ದೀನ್, ತುಮಕೂರು ಜಿಲ್ಲೆಯಲ್ಲಿ ನಾಳೆಯಿಂದ 150 ಬಸ್​ಗಳು ಸಂಚಾರ ಮಾಡಲಿವೆ. ಅವಶ್ಯಕತೆ ಅನುಗುಣವಾಗಿ ಹೆಚ್ಚಿನ ಬಸ್​ ಓಡಿಸಲು ನಿರ್ಧರಿಸಲಾಗಿದೆ. ತುಮಕೂರಿನಿಂದ ಬೆಂಗಳೂರಿಗೆ 40 ಬಸ್​ಗಳು ಸಂಚರಿಸಲಿವೆ ಎಂದಿದ್ದಾರೆ.

ಎಲ್ಲಾ ತಾಲೂಕುಗಳಿಂದ ತಲಾ 5 ಬಸ್​ಗಳು ಬೆಂಗಳೂರಿನ ಕಡೆಗೆ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಲಸಿಕೆ ಪಡೆದ ಚಾಲಕ, ನಿರ್ವಾಹಕರಿಗೆ ಆದ್ಯತೆ ಮೇರೆಗೆ ಕೆಲಸ ಮಾಡಲ ಅವಕಾಶ ನೀಡಲಾಗ್ತದೆ. ನಮ್ಮ ವಿಭಾಗದಲ್ಲಿ 72 ಚಾಲಕರು ಎರಡೂ ಡೋಸ್​ ಲಸಿಕೆ ಪಡೆದಿದ್ದಾರೆ ಎಂದು ತಿಳಿಸಿದರು.

ಪ್ರಸ್ತುತ ಜಿಲ್ಲೆಯಲ್ಲಿ 8 ಮಂದಿ ಚಾಲಕರು ಕೋವಿಡ್ ಸೋಂಕಿನಿಂದ ಬಳಲುತ್ತಿದ್ದಾರೆ. ಅವರು ಸೂಕ್ತ ಚಿಕಿತ್ಸೆ ಪಡೆದ ನಂತರ ಕೆಲಸಕ್ಕೆ ಹಾಜರಾಗಲಿದ್ದಾರೆ ಎಂದು ಮಾಹಿತಿ ನೀಡಿದರು.

ಇದನ್ನೂಓದಿ: ನಾಳೆಯಿಂದ ಬಸ್​, ಮೆಟ್ರೋ ಸೇವೆ ಪುನರಾರಂಭ: ಸಾರಿಗೆ ಸಂಸ್ಥೆಗಳಿಂದ ಸಕಲ ಸಿದ್ಧತೆ

ABOUT THE AUTHOR

...view details