ತುಮಕೂರು: ನಾನು ಚಪ್ಪಾಳೆ ಶಬ್ದದ ಬೆನ್ನತ್ತಿ ರಂಗಭೂಮಿಗೆ ಬಂದಿದ್ದು ಎಂದು ರಂಗಭೂಮಿ ಕಲಾವಿದ ಹಾಗೂ ಚಿತ್ರನಟ ಅಚ್ಯುತ್ ಕುಮಾರ್ ಹೇಳಿದರು.
ನಗರದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ 10 ದಿನಗಳ ಅಭಿನಯ ಕಾರ್ಯಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಟನ ರಂಗಕ್ಕೆ ಪಾದಾರ್ಪಣೆ ಮಾಡಲು ನನ್ನನ್ನು ಆಕರ್ಷಿಸಿದ್ದು ಚಪ್ಪಾಳೆ. ಕಲಾವಿದರು ನಟನೆಯ ಸುಖವನ್ನು ತಮ್ಮಷ್ಟಕ್ಕೆ ತಾವೇ ಅನುಭವಿಸುವ ಮೂಲಕ ಪಾತ್ರಕ್ಕೆ ಜೀವ ತುಂಬಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.