ಕರ್ನಾಟಕ

karnataka

ಹೈಕೋರ್ಟ್ ಅಸಿಂಧುಗೊಳಿಸಿದೆ ಆದ್ರೆ ಅನರ್ಹಗೊಳಿಸಿಲ್ಲ: ಗೌರಿಶಂಕರ್

By

Published : Apr 1, 2023, 10:12 PM IST

ಜೆಡಿಎಸ್ ಪಕ್ಷದ ನಾಯಕ ಹೆಚ್​​ಡಿ ಕುಮಾರಸ್ವಾಮಿ ಬಳಿ ಮಾತನಾಡಿದ್ದೇನೆ, ಅವರು ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ನನ್ನ ಹೋರಾಟಕ್ಕೆ ಅವರ ಸಹಕಾರ ಇದೆ. ಕೇಸ್ ನಾವು ನೋಡಿಕೊಳ್ಳುತ್ತೇವೆ, ನೀನು ಕ್ಷೇತ್ರದಲ್ಲಿ ಕೆಲಸ ಮಾಡು ಅಂದಿದ್ದಾರೆ ಎಂದು ಗೌರಿಶಂಕರ್​ ಹೇಳಿದರು.

high-court-order-invalidated-but-not-disqualified-gaurishankar
ಹೈಕೋರ್ಟ್ ನೀಡಿದ ಆದೇಶದಲ್ಲಿ ಅಸಿಂಧುಗೊಳಿಸಿದೆ ಆದ್ರೆ ಅನರ್ಹಗೊಳಿಸಿಲ್ಲ: ಗೌರಿಶಂಕರ್

ಹೈಕೋರ್ಟ್ ನೀಡಿದ ಆದೇಶದಲ್ಲಿ ಅಸಿಂಧುಗೊಳಿಸಿದೆ ಆದ್ರೆ ಅನರ್ಹಗೊಳಿಸಿಲ್ಲ: ಗೌರಿಶಂಕರ್

ತುಮಕೂರು:ಹೈಕೋರ್ಟ್ ಆದೇಶದ ಮೇಲೆ ಹಲವು ಊಹಾಪೋಹಗಳು ಚರ್ಚೆ ಆಗುತ್ತಿದ್ದು, ದೂರುದಾರರ ಅರ್ಜಿಯನ್ನು ಭಾಗಶಃ ಹೈಕೋರ್ಟ್‌ ಪುರಸ್ಕರಿಸಿದೆ. ನಾನು ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಬಾರದು ಎಂದು ಹೈಕೋರ್ಟ್‌ ಆದೇಶದಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ ಎಂದು ಗೌರಿಶಂಕ‌ರ್ ತಿಳಿಸಿದ್ದಾರೆ.

ತುಮಕೂರು ತಾಲೂಕು ಬಳ್ಳಗೆರೆ ಗ್ರಾಮದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ಆದೇಶದಲ್ಲಿ ಅಸಿಂಧುಗೊಳಿಸಿದೆ ಎಂದು ಮಾತ್ರ ಹೇಳಿದೆ. ಅನರ್ಹ ಎಂದು ಎಲ್ಲೂ ಹೇಳಿಲ್ಲ. 6 ವರ್ಷ ಸ್ಪರ್ಧೆ ಮಾಡುವ ಹಾಗಿಲ್ಲ ಎಂದು ಎಲ್ಲೂ ಆದೇಶ ಇಲ್ಲ, ಮಾಧ್ಯಮಗಳ ಮೂಲಕ ತೇಜೋವಧೆ ಮಾಡಲು ಪ್ರಯತ್ನಿಸಿದಂತಿದೆ ಎಂದು ದೂರಿದರು.

ನನ್ನ ಹೋರಾಟಕ್ಕೆ ಹೆಚ್​ಡಿಕೆ ಸಹಕಾರ ಇದೆ: ಕಾರ್ಯಕರ್ತರು ಆತಂಕಪಡುವ ಅಗತ್ಯ ಇಲ್ಲ. ಹೈಕೋರ್ಟ್ ಆದೇಶ ಪ್ರಶ್ನಿಸಲು ತಡೆ ತೆಗೆದುಕೊಂಡಿದ್ದೇವೆ. 30 ದಿನಗಳ ಕಾಲ ತಡ ಇದೆ, ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಪಕ್ಷದ ನಾಯಕ ಹೆಚ್​​ಡಿ ಕುಮಾರಸ್ವಾಮಿ ಜೊತೆ ಮಾತನಾಡಿದ್ದೇನೆ. ಅವರು ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ನನ್ನ ಹೋರಾಟಕ್ಕೆ ಕುಮಾರಸ್ವಾಮಿ ಅವರ ಸಹಕಾರ ಇದೆ. ಕೇಸ್ ನಾವು ನೋಡಿಕೊಳ್ಳುತ್ತೇವೆ, ನೀನು ಕ್ಷೇತ್ರದಲ್ಲಿ ಕೆಲಸ ಮಾಡು ಅಂದಿದ್ದಾರೆ. ಈ ಕ್ಷೇತ್ರದಲ್ಲಿ ನಾನು ರಾಜಕಾರಣಿಯಾಗಿ ಗುರುತಿಸಿಕೊಂಡಿಲ್ಲ. ಮನೆ ಮಗನಾಗಿ ಗುರುತಿಸಿಕೊಂಡಿದ್ದೇನೆ ಎಂದು ಹೇಳಿದರು.

ಮಾಜಿ ಶಾಸಕರು ಧರ್ಮ ಗೆದ್ದಿದೆ ಎಂದಿದ್ದಾರೆ. ಯಾವುದು ಧರ್ಮ? ನಕಲಿ ಅಂಕಪಟ್ಟಿ ಮಾಡಿ ಸಿಕ್ಕಿ ಬಿದ್ದಿದ್ದು ಧರ್ಮನಾ? ನಾನು ಸತ್ಯ ಹರಿಶ್ಚಂದ್ರ ಎಂದು ಮಾಜಿ ಶಾಸಕರು ತೋರಿಸಿಕೊಳ್ಳುವುದು ಬೇಡ. ನಿಮ್ಮ ಅರ್ಜಿಯನ್ನು ಪೂರ್ಣವಾಗಿ ಒಪ್ಪಿಕೊಂಡಿಲ್ಲ. ಇದು ಎಲ್ಲೋ ಒಂದು ಕಡೆ ನಮಗೆ ಜಯ ಸಿಕ್ಕಿದ ಹಾಗೆ. ಯಾವತ್ತೂ ನಾನು ನಂಬಿದ ಜನ ನನ್ನ ಮನೆಗೆ ಬರಲ್ಲವೋ ಅಂದೇ ನನ್ನ ಸಾವು ಎಂದು ಗೌರಿಶಂಕರ್ ಭಾವುಕರಾದರು.

ಗೌರಿಶಂಕರ್ ಅವರು ಕಳೆದ ಚುನಾವಣೆ ಅವಧಿಯಲ್ಲಿ ಗ್ರಾಮಾಂತರ ಕ್ಷೇತ್ರದ ಮತದಾರರಿಗೆ ವಿಮಾ ಬಾಂಡ್‌ಗಳನ್ನು ನೀಡುವ ಆಮಿಷ ಒಡ್ಡಿದ್ದರು. ಜತೆಗೆ ನಂತರ ನೀಡಿದ ವಿಮಾ ಬಾಂಡ್‌ಗಳು ನಕಲಿಯಾಗಿದ್ದವು ಎಂದು ಆರೋಪಿಸಲಾಗಿತ್ತು, ಈ ಹಿನ್ನೆಲೆಯಲ್ಲಿ ಬಿಜೆಪಿ ಪರಾಜಿತ ಅಭ್ಯರ್ಥಿ ಸುರೇಶ್ ಗೌಡ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಹಲವು ಸುತ್ತಿನ ವಿಚಾರಣೆ ಬಳಿಕ ಗುರುವಾರ ಅಂತಿಮ ಆದೇಶ ಹೊರಬಿದ್ದಿದ್ದು, ಗೌರಿಶಂಕರ್ ಅವರ ಆಯ್ಕೆಯನ್ನು ಹೈಕೋರ್ಟ್​ ಅನೂರ್ಜಿತಗೊಳಿಸಿತ್ತು.

ಹೈಕೋರ್ಟ್‌ನಿಂದ ಹೊರ ಬಿದ್ದಿರುವ ಈ ತೀರ್ಪಿನಿಂದ ಗೌರಿಶಂಕರ್ ಮತ್ತು ಜೆಡಿಎಸ್‌ಗೆ ಹಿನ್ನೆಡೆಯಾಗಿದೆ. 32 ಸಾವಿರ ವಯಸ್ಕರು ಹಾಗೂ 16 ಸಾವಿರ ಮಕ್ಕಳಿಗೆ ನಕಲಿ ವಿಮಾ ಪಾಲಿಸಿ ಬಾಂಡ್ ಅನ್ನು ಗೌರಿಶಂಕರ್ ವಿತರಿಸಿದ್ದರು ಎಂಬ ಆರೋಪವನ್ನು ಎದುರಿಸುತ್ತಿದ್ದರು. ಈಗ ಆ ಪ್ರಕರಣ ಕೋರ್ಟ್‌ನಲ್ಲಿ ಸಾಬೀತಾಗಿದ್ದು, ಈ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ನನಗೆ ಅರ್ಜಿ ಸಲ್ಲಿಸಲು ಹೈಕೋರ್ಟ್ ಅವಕಾಶ ನೀಡಿದೆ. ಆಯ್ಕೆ ಅಸಿಂಧು ಮಾಡಿದ ಆದೇಶ ಜಾರಿಗೆ ಒಂದು ತಿಂಗಳ ಕಾಲ ತಡೆಯಾಜ್ಞೆಯನ್ನೂ ನೀಡಿದೆ. ಇದೇ ವೇಳೆ ಗೌರಿ ಶಂಕರ್ ಸಹ ಸುಪ್ರೀಂಕೋರ್ಟ್‌ನಲ್ಲಿ ತೀರ್ಪು ಪ್ರಶ್ನಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದರು.

ಇದನ್ನೂ ಓದಿ:ಚುನಾವಣಾ ಅಕ್ರಮ ಆರೋಪ: ಜೆಡಿಎಸ್ ಶಾಸಕ ಗೌರಿ ಶಂಕರ್ ಆಯ್ಕೆ ಅನೂರ್ಜಿತ

ABOUT THE AUTHOR

...view details