ಕರ್ನಾಟಕ

karnataka

ಭಾರಿ ಮಳೆಗೆ ಕುಸಿದ ಹೇಮಾವತಿ ನಾಲೆ.. ರೈತರಿಗೆ ಹೆಚ್ಚಿದ ಆತಂಕ

By

Published : Aug 4, 2022, 1:34 PM IST

Updated : Aug 4, 2022, 1:49 PM IST

ಭಾರೀ ಮಳೆಗೆ ತುಮಕೂರಿನ ಕಿಬ್ಬನಹಳ್ಳಿ ಬಳಿ ಹೇಮಾವತಿ ನಾಲೆ ಕುಸಿದಿದೆ. ನಾಲೆಯ ಹರಿವಿನ ಪಾತ್ರ ಬದಲಾಗುವ ಆತಂಕ ರೈತರಿಗೆ ಎದುರಾಗಿದೆ.

hemavati-canal-collapsed-due-to-heavy-rains
ತುಮಕೂರು: ಭಾರಿ ಮಳೆಗೆ ಕುಸಿದ ಹೇಮಾವತಿ ನಾಲೆ

ತುಮಕೂರು : ಭಾರೀ ಮಳೆಯಿಂದಾಗಿ ಹೇಮಾವತಿ ಕಾಲುವೆ ಮಳೆ ನೀರಿನ ರಭಸಕ್ಕೆ ಸಾಕಷ್ಟು ಹಾನಿಯಾಗಿದೆ. ಇದರಿಂದಾಗಿ ಹರಿಯುವ ನೀರಿನ ದಿಕ್ಕು ಬದಲಾಗುವ ತುಮಕೂರು ಜಿಲ್ಲೆಯ ರೈತರಿಗೆ ಆತಂಕ ಶುರುವಾಗಿದೆ.

ಭಾರಿ ಮಳೆಗೆ ಕುಸಿದ ಹೇಮಾವತಿ ನಾಲೆ.. ರೈತರಿಗೆ ಹೆಚ್ಚಿದ ಆತಂಕ

ಚಿಕ್ಕನಾಯಕನಹಳ್ಳಿಗೆ ಹಾಸನ ಜಿಲ್ಲೆಯ ಗೋರೂರಿನ ಹೇಮಾವತಿ ಜಲಾಶಯದಿಂದ ಪ್ರತಿ ವರ್ಷ ನೀರು ಹರಿಸಲಾಗುತ್ತಿದೆ. ಈ ಬಾರಿ ಕಿಬ್ಬನಹಳ್ಳಿ ಸಮೀಪ ನಾಲೆ ಕುಸಿದಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.

ಚಿಕ್ಕನಾಯಕನಹಳ್ಳಿ ತಾಲೂಕಿನ ಬಿಳಿಗೆರೆ ಕಿಬ್ಬನಹಳ್ಳಿ ಗ್ರಾಮದ ಕಡೆಗೆ ಹರಿಯುತ್ತಿದ್ದ ಕಾಲುವೆ ನೀರಿನ ದಿಕ್ಕು ಬದಲಾಗಿದ್ದು, ಭಾರೀ ಮಳೆಯಿಂದಾಗಿ ಕಾಲುವೆಯ ಒಂದು ಬದಿಯಲ್ಲಿ ಮಣ್ಣುಕುಸಿತ ಉಂಟಾಗಿ ಈ ಪರಿಸ್ಥಿತಿ ನಿರ್ಮಾಣವಾಗಿದೆ.

ಓದಿ :ಕೋಲಾರದಲ್ಲಿ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಯುವಕ ಶವವಾಗಿ ಪತ್ತೆ

Last Updated : Aug 4, 2022, 1:49 PM IST

ABOUT THE AUTHOR

...view details