ತುಮಕೂರು: ಗಾಂಧೀಜಿಯವರು ಎಂದಿಗೂ ನಾನು ಹೇಳಿದಂತೆ ನಡೆ ಎಂದು ಹೇಳಿಲ್ಲ. ಆದರೆ ನಾನು ಮಾಡಿರುವ, ನಡೆದು ಬಂದ ಹಾದಿಯಲ್ಲಿ ನಡೆಯಿರಿ ಎಂದು ಮಾರ್ಗದರ್ಶನ ತೋರಿದ್ದಾರೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವೈ.ಎಸ್.ಸಿದ್ದೇಗೌಡ ಹೇಳಿದರು.
ಮಹಾತ್ಮ ಗಾಂಧೀಜಿಯವರ 159 ನೇ ಜನ್ಮದಿನಾಚರಣೆಯ ಅಂಗವಾಗಿ ತುಮಕೂರು ವಿಶ್ವವಿದ್ಯಾಲಯದಲ್ಲಿ ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ತುಮಕೂರು ವಿಶ್ವವಿದ್ಯಾಲಯದ ಡಿ. ದೇವರಾಜ ಅರಸು ಅಧ್ಯಯನ ಪೀಠ ವತಿಯಿಂದ 'ಗಾಂಧಿ ತಿಳಿವ ಹಾದಿ' ಎಂಬ ವಿಚಾರ ಸಂಕಿರಣವನ್ನು ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಉಪಾಧ್ಯಕ್ಷ ವಿ.ಎಂ.ತಿಪ್ಪನಗೌಡ ಉದ್ಘಾಟಿಸಿದರು.