ತುಮಕೂರು: ಕೊರಟಗೆರೆ ವಿಧಾನಸಭಾ ಕ್ಷೇತ್ರದ ಮತದಾರರು ನನ್ನನ್ನು ಎರಡು ಬಾರಿ ಶಾಸಕನಾಗಿ ಆಯ್ಕೆ ಮಾಡಿದ್ದರು. ಆದ್ರೆ ಒಳ್ಳೆಯ ಟೈಮ್ನಲ್ಲಿ ಪಲ್ಟಿ ಹೊಡೆಸಿದ್ದಾರೆ. ಇದರಿಂದಾಗಿ ನಾನು ಮುಖ್ಯಮಂತ್ರಿಯಾಗುವುದು ತಪ್ಪಿದಂತಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಹೇಳಿದರು.
ಮತದಾರರು ನನ್ನನ್ನು 2 ಬಾರಿ ಗೆಲ್ಲಿಸಿದ್ರು.. ಸಿಎಂ ಆಗಬೇಕು ಅನ್ನೋ ಟೈಮಲ್ಲಿ ಪಲ್ಟಿ ಹೊಡೆಸಿದ್ರು: ಜಿ ಪರಮೇಶ್ವರ್ - ಜಿ ಪರಮೇಶ್ವರ್
ಕೊರಟಗೆರೆ ಕ್ಷೇತ್ರದ ಜನ 2 ಬಾರಿ ನನ್ನನ್ನು ಆಯ್ಕೆ ಮಾಡಿದ್ದಾರೆ. ಆದರೆ ಒಳ್ಳೆ ಟೈಮ್ನಲ್ಲಿ ಪಲ್ಟಿ ಹೊಡೆಸಿದ್ದಾರೆ. ಹಣೆಬರಹ ಸರಿ ಇದ್ದಿದ್ದರೆ 2013 ರಲ್ಲಿ ನಾನು ಮುಖ್ಯಮಂತ್ರಿ ಆಗುತ್ತಿದ್ದೆ ಎಂದು ಮಾಜಿ ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಬೇಸರ ವ್ಯಕ್ತಪಡಿಸಿದರು.
![ಮತದಾರರು ನನ್ನನ್ನು 2 ಬಾರಿ ಗೆಲ್ಲಿಸಿದ್ರು.. ಸಿಎಂ ಆಗಬೇಕು ಅನ್ನೋ ಟೈಮಲ್ಲಿ ಪಲ್ಟಿ ಹೊಡೆಸಿದ್ರು: ಜಿ ಪರಮೇಶ್ವರ್ g parameshwar](https://etvbharatimages.akamaized.net/etvbharat/prod-images/768-512-16732827-thumbnail-3x2-lek.jpg)
ಜಿ ಪರಮೇಶ್ವರ್
ನಮ್ಮೂರ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಜಿ ಪರಮೇಶ್ವರ್
ಜಿಲ್ಲೆಯ ಕೊರಟಗೆರೆ ತಾಲೂಕಿನ ತೋವಿನಕೆರೆಯಲ್ಲಿ ನಡೆದ ನಮ್ಮೂರ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2013 ರಲ್ಲಿ ಒಂದೇ ಒಂದು ಮತದಲ್ಲಿ ಗೆದ್ದಿದ್ದರೆ ಈ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶ ಇತ್ತು. ಆದ್ರೆ ನಂಗೂ ಹಣೆಬರಹ ಇರಬೇಕಲ್ಲಾ, ಕೇವಲ ನಿಮ್ಮ ಬಗ್ಗೆ ಹೇಳಿದ್ರೆ ಆಗುವುದಿಲ್ಲ. ಹಾಗಾಗಿ, ಪರವಾಗಿಲ್ಲ ಬಿಡಿ ಎಂದು ಮುಖ್ಯಮಂತ್ರಿ ಆಗುವ ಕನಸು ನನಸಾಗದ್ದಕ್ಕೆ ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ:'ಕಾಲಚಕ್ರ ಹೀಗೆಯೇ ಇರುವುದಿಲ್ಲ..' ಜಿಲ್ಲಾಧಿಕಾರಿ ವಿರುದ್ಧ ಜಿ.ಪರಮೇಶ್ವರ್ ಗರಂ