ತುಮಕೂರು: ಜಾನಪದವೇ ಜನಪದರಿಗೆ ಜೀವನದ ಕಾವ್ಯವಾಗಿತ್ತು, ವೇದಕ್ಕೆ, ಶಾಸ್ತ್ರಕ್ಕೆ ಮಣಿಯದವರು, ಜಾನಪದ ಹಾಡಿಗೆ ಮಣಿಯುತ್ತಾರೆ, ಎಂದು ವಿದ್ವಾಂಸ ಪಾವಗಡ ಸಣ್ಣ ನಾಗಪ್ಪ ತಿಳಿಸಿದರು.
ವೇದಕ್ಕೆ, ಶಾಸ್ತ್ರಕ್ಕೆ ಮಣಿಯದವರು ಜಾನಪದ ಹಾಡಿಗೆ ಮಣಿಯುತ್ತಾರೆ : ವಿದ್ವಾಂಸ ಪಾವಗಡ ಸಣ್ಣ ನಾಗಪ್ಪ - ತುಮಕೂರು ವಿಶ್ವವಿದ್ಯಾಲಯ
ಜಾನಪದ ಮತ್ತು ಜನಸಂಸ್ಕೃತಿ ಇವೆರಡು ಪದಗಳು ಬಹಳ ಮುಖ್ಯವಾದವು. ಜಾನಪದ ಎಂಬುದರಲ್ಲಿ ಜನ ಸಂಸ್ಕೃತಿ ಇದೆ ಎಂದು ಜಾನಪದ ವಿದ್ವಾಂಸ ಪಾವಗಡ ಸಣ್ಣ ನಾಗಪ್ಪ ತಿಳಿಸಿದರು.
![ವೇದಕ್ಕೆ, ಶಾಸ್ತ್ರಕ್ಕೆ ಮಣಿಯದವರು ಜಾನಪದ ಹಾಡಿಗೆ ಮಣಿಯುತ್ತಾರೆ : ವಿದ್ವಾಂಸ ಪಾವಗಡ ಸಣ್ಣ ನಾಗಪ್ಪ](https://etvbharatimages.akamaized.net/etvbharat/images/768-512-2752349-446-202a5fb4-a86f-4eba-ab63-23ca1f506ea0.jpg)
ತುಮಕೂರು ವಿಶ್ವವಿದ್ಯಾಲಯದಲ್ಲಿ 'ಜಾನಪದ-ಶ್ರಮ ಜೀವನದ ಪ್ರತಿಬಿಂಬ' ಎಂಬ ವಿಚಾರ ಸಂಕಿರಣ
ತುಮಕೂರು ವಿಶ್ವವಿದ್ಯಾಲಯದಲ್ಲಿ 'ಜಾನಪದ-ಶ್ರಮ ಜೀವನದ ಪ್ರತಿಬಿಂಬ' ಎಂಬ ವಿಚಾರ ಸಂಕಿರಣ
ತುಮಕೂರು ವಿಶ್ವವಿದ್ಯಾಲಯದಲ್ಲಿ 'ಜಾನಪದ-ಶ್ರಮ ಜೀವನದ ಪ್ರತಿಬಿಂಬ' ಎಂಬ ವಿಚಾರ ಸಂಕಿರಣವನ್ನು ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ವೈ. ಎಸ್. ಸಿದ್ದೇಗೌಡ ಉದ್ಘಾಟಿಸಿ ಮಾತನಾಡಿದರು. ಇಂದು ದೃಶ್ಯ ಮಾಧ್ಯಮದಿಂದ ಜಾನಪದಮರೀಚಿಕೆಯಾಗುತ್ತಿದೆ. ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂದು ಹೇಳುತ್ತಾರೆ, ಆ ಗಾದೆಗಳನ್ನು ನಮ್ಮ ಜಾನಪದದಲ್ಲಿ ಕಾಣಬಹುದು.ನಮ್ಮ ಜೀವನವನ್ನು ಯಶಸ್ವಿಯಾಗಿ ಕೊಂಡೊಯ್ಯಲು ಜನಪದದ ಮಹತ್ವ ಅರಿತರೆ ಸಾಕು ಎಂದರು.