ತುಮಕೂರು:ಕ್ರಿಶ್ಚಿಯನ್ ಸಮುದಾಯದವರು ಒಂದೆಡೆ ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿರೆ ಇನ್ನೊಂದೆಡೆ ಕೊರೋನ ರೋಗದ ಭೀತಿ ಎದುರಾಗಿದೆ.
ತುಮಕೂರಿನ ಚರ್ಚ್ಗಳಲ್ಲಿ ಈ ಬಾರಿ ಪುನಃ ರೋಗ ಹರಡುವಿಕೆಯ ಸುಳಿವನ್ನು ಸರ್ಕಾರ ನೀಡಿದ್ದು ಮುಂಜಾಗ್ರತೆ ಹಿನ್ನೆಲೆಯಲ್ಲಿ ತೆಗೆದುಕೊಳ್ಳಬೇಕಿರುವಂತಹ ಕ್ರಮಗಳನ್ನು ಪಾಲನೆ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಸಿಎಸ್ಐ ಚರ್ಚ್ ಫಾದರ್ ಸಂದೇಶ್ ಹೇಳಿದರು.
ಅದರಲ್ಲೂ ಚರ್ಚ್ಗೆ ಬರುವಂತಹ ಸಾರ್ವಜನಿಕರು ಹಾಗೂ ಭಕ್ತಾದಿಗಳಿಗೆ ಕಡ್ಡಾಯವಾಗಿ ಮಾಸ್ಕ್ಗಳನ್ನು ಧರಿಸುವಂತೆ ಸೂಚನೆ ನೀಡಲಾಗಿದ್ದು, ಹಾಗೂ ಸುತ್ತಲೂ ಸ್ಯಾನಿಟೈಸರ್ ಬಳಕೆಗೆ ಕೂಡ ನಿರ್ಧರಿಸಲಾಗಿದೆ.
ಕಳೆದ ಮೂರು ವರ್ಷಗಳಿಂದ ವಿಪರೀತ ಕೊರೋನ ಸೋಂಕಿನ ಹರಡುವಿಕೆ ಹಿನ್ನೆಲೆ ಕ್ರಿಸ್ಮಸ್ ಆಚರಣೆಗೆ ಸಾಕಷ್ಟು ಹಿನ್ನಡೆ ಉಂಟಾಗಿತ್ತು. ಆದರೆ ಈ ಬಾರಿ ಆ ರೀತಿಯಾದ ಗೊಂದಲದ ವಾತಾವರಣ ನಿರ್ಮಾಣವಾಗುವುದಿಲ್ಲ ಎಂಬ ವಿಶ್ವಾಸವನ್ನು ಸಿಎಸ್ಐ ಚರ್ಚಿನ ಫಾದರ್ ಸಂದೇಶ ತಿಳಿಸಿದರು.
ಆ ಸಂದರ್ಭದಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿ ಭಕ್ತರು ಚರ್ಚ್ಗಳಿಗೆ ಬಂದು ಪ್ರಾರ್ಥನೆ ಮಾಡಿದ್ದರು.